Tuesday, December 30, 2008

ತಾಯಿಯೇ ಮೊದಲ ಗುರು


“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು”, ಈ ಗಾದೆ ಮಾತು ಎಲ್ಲರಿಗು ಗೊತ್ತಿರುವ ವಿಷಯವೆ. ಆದರೆ ಎಷ್ಟು ಜನ ಇದನ್ನು ಒಪ್ಪುತ್ತಾರೋ ಇಲ್ಲವೊ ನನಗೆ ಗೊತ್ತಿಲ್ಲ. ನನ್ನ ವಿಷಯದಲ್ಲಂತು ಈ ಮಾತು ಬಹಳ ಸತ್ಯವಾದದ್ದು. ನನ್ನ ತಾಯಿಯಿಂದ ನಾನು ಕಲಿತ ಪಾಠ ಬಹಳಷ್ಟು. ಅದರಲ್ಲಿ ಬಹು ಮುಖ್ಯ ಪಾಠ ಕಲಿತದ್ದು ದುಡ್ಡಿನ ಮಹತ್ವ. ದುಡ್ಡು ಯಾರಿಗೆ ಬೇಡ ಹೇಳಿ. ಆಗೆ ಅದನ್ನ ಕರ್ಚು ಮಾಡೋದ್ರಲ್ಲೂ ಬಹಳ ಮಂದಿ ಇಂಜರಿಯುವುದಿಲ್ಲ. ಆ ದುಡ್ಡು ನಮ್ಮದಾಗಿರಲಿ ಇಲ್ಲವೆ ಬೇರೆಯವರದ್ಡಾಗಿರಲಿ, ಒಟ್ಟಿನಲ್ಲಿ ಕರ್ಚು ಮಾಡಬೇಕು. ದುಡ್ಡಿನ ಬೆಲೆ ತಿಳಿಯದ ಜನರಲ್ಲಿ ಬಹುಶಹ ನಾನು ಒಬ್ಬಳಾಗಿರುತ್ತಿದ್ದೆನೆನೊ, ನನ್ನ ತಾಯಿಯು ಕಳಿಸಿದ ಪಾಠದಿಂದ ಇಂದು ನನಗೆ ದುಡ್ಡಿನ ಬೆಲೆ ಏನು ಅನ್ನೊ ಅರಿವಿದೆ.

ಆಗ ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಲ್ಲಿ ಕೆಲವೊಮ್ಮೆ ಶಿಕ್ಷಕರು ಏನಾದರೋ ತಿಂಡಿ(ಸಮೋಸ, ಚಕ್ಕುಲ್ಲಿ, ಚೊಚೋ ಇತ್ಯಾದಿ) ತಂದು ಮಧ್ಯಾನದ ಸಮಯದಲ್ಲಿ ಮಾರುತ್ತಿದ್ದರು. ಬೇಕೆನ್ನುವ ಮಕ್ಕಳು ದುಡ್ಡು ಕೊಟ್ಟು ಆ ತಿಂಡಿ ತೆಗೆದುಕೊಳ್ಳಬಹುದು. ನಮ್ಮ ಮನೆಯಲ್ಲಿ ಪಾಕೆಟ್ ಮನೀ ಅನ್ನೊ ಆಚರವೆಲ್ಲ ಇರಲಿಲ್ಲ. ದುಡ್ಡು ಬೇಕೆಂದಾಗ ಯಾವುದಕ್ಕೆ ಬೇಕು ಎಂದು ಹೇಳಿದರೆ ಮಾತ್ರ ನಮ್ಮ ತಾಯಿ ಹಣ ಕೊಡುತ್ತಿದ್ದರು.

ಹೀಗೆ ಒಮ್ಮೆ ಒಬ್ಬ ಶಿಕ್ಷಕಿ ಚಕ್ಕುಲ್ಲಿ, ಚೊಚೋ ತಿಂಡಿ ತಯಾರಿಸಿ ತಂದಿದ್ದರು. ನನ್ನ ಬಳಿ ದುಡ್ಡಿ ರಲಿಲ್ಲ. ಆ ಶಿಕ್ಷಕಿ, ಇವತ್ತು ತಿಂಡಿ ತೆಗೆದುಕೊಳ್ಳಿ, ನಾಳೆ ಅದರ ದುಡ್ಡು ಕೊಡಿ ಅಂತ ಹೇಳಿದರು. ಅಷ್ಟೇ ಸಾಕಾಗಿತ್ತೇನೋ ನನಗೆ ಗೊತಿಲ್ಲ, ನನ್ನ ಸ್ನೇಹಿತರೊಡನೆ ನಾನು ಕೂಡ ಹೋದೆ, ಒಂದು ಪ್ಲೇಟ್ ಚಕ್ಕುಲ್ಲಿ, ಚೊಚೋ ತೆಗೆದುಕೊಂಡು ತಿಂದೆ. ಆ ಒಂದು ಪ್ಲೇಟ್ ತಿಂಡಿಗೆ 2 ರೂಪಾಯಿಗಳು. ಸರಿ ನಾಳೆ ಅಮ್ಮನ ಹತ್ತಿರ ಈಸ್‌ಕೊಂಡು ಬಂದು ಕೊಟ್ಟರೆ ಆಯಿತು ಎಂದುಕೊಂಡೆ. ಸಾಯಾಂಕಾಲ ಮನೆಗೆ ಹೋದಮೇಲೆ ಅಮ್ಮನಿಗೆ 2 ರೂಪಾಯಿ ಬೇಕು ಎಂದು ಕೇಳಿದೆ. ಅಮ್ಮ ಏನಕ್ಕೆ ಎಂದರು. ಅವರಿಗೆ ನಡೆದ ಸಂಗತಿ ಹೇಳಿದೆ. ಆಗ ನನ್ನ ತಾಯಿ ಯಾರನ್ನು ಕೇಳಿ ತಿಂಡಿ ತಿಂದೆ. ನಿನ್ನ ಬಳಿ ಹಣವಿಲ್ಲದ ಮೇಲೆ ಯಾಕೆ ತಿಂಡಿ ತಗೊಂಡು ತಿಂದೆ. ನಿನ್ನ ಹತ್ತಿರ ದುಡ್ದಿರಬೇಕು, ಆ ದುಡ್ಡು ನಿನ್ನ ಸ್ವಂತ ದುಡಿಮೆಯದ್ದಾಗಿರಬೇಕು, ಆಗ ನಿನಗೆ ಅದನ್ನು ಕರ್ಚು ಮಾಡುವ ಅಧಿಕಾರವಿದೆ. ಅದು ಬಿಟ್ಟು ಇಲ್ಲದ ದುಡ್ಡಲ್ಲಿ ತಿಂದು ಬಂದಿದೀಯಾ, ಸಾಲ ಮಾಡೋದು ಬಹಳ ಸುಲಭ, ಆದರೆ ಅದನ್ನ ತೀರಿಸೋದು ಬಹಳ ಕಷ್ಟ ಎಂದು ಹೇಳಿದರು. ದುಡ್ಡು ಕರ್ಚು ಮಾಡೋರಿಗೆ ಏನು ಗೊತ್ತಾಗುತ್ತದೆ, ಅದ್ದನ್ನ ಸಂಪಾಧನೆ ಮಾಡೋರಿಗೆ ತಾನೆ ಅದರ ಕಷ್ಟ ತಿಳಿಯೋದು. 2 ರೂಪಾಯಿ ಇದ್ದರೆ ಒಂದು ದಿನದ ತರಕಾರಿ ಬರುತ್ತೆ(ಆಗ ತರಕಾರಿ ಬೆಲೆ ಹೀಗಿನಷ್ಟಿರಲಿಲ್ಲವೇನೋ) ಎಂದು ಬೈದರು. ಕೊನೆಗೆ ನಾನಂತೂ 2 ರೂಪಾಯಿ ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡ್ಕೋ ಎಂದು ಹೇಳಿ ಬಿಟ್ಟರು. ನನಗೆ ಏನು ಮಾಡೋದು ತಿಳಿಯಲಿಲ್ಲ. ಆ ಸಮಯದಲ್ಲಿ ನನ್ನ ತಂದೆ ಊರಿನಲ್ಲಿ ಇರಲಿಲ್ಲ. ಮಾರನೆ ದಿನ ಶಾಲೆಗೆ ಹೋದೆ, ಆ ಶಿಕ್ಷಕಿ ತರಗತಿಗೆ ಬಂದು, ನೆನ್ನೆ ತಿಂಡಿ ತೆಗೆದು ಕೊಂಡೋರು 2 ರೂಪಾಯಿ ತಂದಿದ್ದೀರಾ, ತಂದು ಕೊಡಿ ಅಂದ್ರೂ. ಎಲ್ರೂ ಕೊಟ್ರೂ, ಆದ್ರೆ ನಾನು ಮಾತ್ರ ಕೊಡ್ಲಿಲ್ಲ. ನಾಳೆ ತಂದು ಕೊಡ್ತೀನಿ ಅಂದೆ. ದಿನ ಮನೆಗೆ ಹೋಗೋದು, ಅಮ್ಮನಿಗೆ ಕೇಳೋದು. ಅಮ್ಮ ಏನೇ ಆದ್ರೂ ನಾನು ಕೊಡಲ್ಲ, ಏನಾದ್ರೋ ಮಾಡ್ಕೋ ಅಂತ ಒಂದೇ ಮಾತು. ಈ ಕಡೆ ಶಾಲೆಯಲ್ಲಿ ಎಲ್ರೂ ಕೊಟ್ಟಾಗಿತ್ತು, ನನ್ನನ್ನು ಬಿಟ್ಟು. ದಿನವು ಎಲ್ಲರ ಮುಂದೆ ನಿಲ್ಲೊದು, ಆ ಶಿಕ್ಷಕಿ ಕೇಳೋದು, ನಾನು ಇಲ್ಲ ಅನ್ನೋದು. ಹೀಗೆ ಒಂದು ವಾರ ಆಯಿತು. ಕೊನೆಗೆ ಆ ಶಿಕ್ಷಕಿ ನಾಳೆ ತರಲಿಲ್ಲ ಅಂದರೆ ಕ್ಲಾಸ್ ನಿಂದ ಹೊರಗೆ ನಿಲ್ಲಿಸ್ತೀನಿ ಅಂದ್ರು. ಅಮ್ಮನಿಗೆ ಕೇಳಿಕೊಂಡೆ, ಅಮ್ಮ ನಿನಗೆ ದುಡ್ಡಿನ ಬೆಲೆ ಗೊತ್ತಾಗಬೇಕು, ಎಷ್ಟು ಕಷ್ಟ ದುಡ್ಡು ಸಂಪಾದಿಸುವುದು ಅನ್ನೋದು ನಿನಗೆ ತಿಳಿಯಬೇಕು, ಹೊರಗೆ ನಿಲ್ಲಿಸಿದ್ರೆ ನಿಂತ್ಕೋ ಅಂತ ಹೇಳಿದ್ರು. ಮಾರನೆ ದಿನ 1 ಗಂಟೆ ಕಾಲ ನನ್ನನು ಕ್ಲಾಸ್ ನಿಂದ ಹೊರಗೆ ನಿಲ್ಲಿಸಿದ್ರು. ಹೊರಗೆ ನಿಂತು ಬಹಳ ಹತ್ತೆ. ಆ ದಿನ ಮನೆಗೆ ಬಂದೊಡನೆ, ಅಳುತಲ್ಲೇ ಅಮ್ಮನಿಗೆ ಇನ್ಯಾವತ್ತು ಈ ರೀತಿ ಮಾಡೋದಿಲ್ಲ, ಇದೆ ಕೊನೆ. ನನ್ನನ್ನು ಕ್ಷಮಿಸು, ದಯವಿಟ್ಟು ಇದೊಂದು ಸಲ ನನಗೆ 2 ರೂಪಾಯಿ ಕೊಡು, ಇನ್ನು ಮುಂದೆ ಯಾವತ್ತು ಈ ರೀತಿ ಮಾಡೋದಿಲ್ಲ, ದುಡ್ಡನ್ನು ವ್ರತ ಕರ್ಚು ಮಾಡೋದಿಲ್ಲ ಎಂದು ಕೇಳಿಕೊಂಡೆ. ಆಗ ಅಮ್ಮ ನನ್ನ ಕಣ್ಣೊರೆಸಿ, ತಗೋ 2 ರೂಪಾಯಿ ಅಂತ ಕೊಟ್ರೂ. ಅವರು ಒಂದು ಮಾತು ಕೂಡ ಹೇಳಲಿಲ್ಲ. ಬಹುಶಹ ಅವರಿಗೆ ಅನಿಸಿತೇನೋ ನನ್ನ ಮಗಳು ಇಂದು ಒಂದು ಬಹುಮುಖ್ಯ ಪಾಠ ಕಲಿತಳು ಎಂದು.

ಇಂದು ನಾನು ದುಡಿಯುತ್ತಿದ್ದೇನೆ, ದುಡ್ಡನ್ನು ಕರ್ಚು ಸಹ ಮಾಡೊತ್ತಿದ್ದೇನೆ, ಆದರೆ ಕರ್ಚು ಮಾಡುವಾಗ ಅಗತ್ಯ ಕಿಂತ ಹೆಚ್ಚಾಗಿ ಮಾಡೋದಿಲ್ಲ, ಪ್ರತಿ ಸಲವೂ ನನ್ನ ತಾಯಿ ಕಲಿಸಿದ ಆ ಚಿಕ್ಕ ಪಾಠ ನೆನಪಾಗುತ್ತದ್ದೆ. ಇಂದು ನನ್ನ ತಾಯಿ ನನ್ನನ್ನು ಏನು ಕೇಳೋದಿಲ್ಲ, ದುಡ್ಡು ಏನು ಮಾಡ್ತೀಯಾ, ಎಷ್ಟು ಕರ್ಚು ಮಾಡ್ತೀಯಾ, ಒಂದು ಪ್ರಶ್ನೆಯು ಕೇಳೋದಿಲ್ಲ, ಆದರೆ ಅವರು ಕಲಿಸಿದ ಪಾಠ ಹಿಂದಿಗೂ ನಾನು ಮರೆತಿಲ್ಲ, ನಿನ್ನ ಬಳಿ ಹಣವಿರಬೇಕು, ಆಗ ನೀನು ಕರ್ಚು ಮಾಡಬೇಕು, ಹಾಗೆ ನೀನು ಕರ್ಚು ಮಾಡಿದ್ದು ವ್ರತವಾಗಬಾರದು.

ನಿಜಕ್ಕೂ ತಾಯಿಗಿಂತ ಮಿಗಿಲಾದ ದೇವರಿಲ್ಲ, ಗುರುಗಳಿಲ್ಲ. ನನ್ನ ತಾಯಿಯೇ ನನ್ನ ಮೊದಲ ಗುರು.

Sunday, August 24, 2008

ದಾರಿ ಬಿಡ್ರಪ್ಪೋ ಗಾಡಿ ಬಂತು…

ಇಷ್ಟು ದಿನ ಗಾಡಿಯಲ್ಲಿ ಪ್ರಯಾಣಿಸುವಾಗ ನನಗೆ ಯಾವ ಭಯವು ಇರಲಿಲ್ಲ. ಆರಾಮಾಗಿ ಕೂತು ಹೋಗುತ್ತಿದ್ದೆ ಯಾಕೆಂದರೆ ಗಾಡಿ ಚಲಿಸುವವರು ಬೇರೆಯವರಾಗಿರುತ್ತಿದ್ದರು. ಆದರೆ ಅದೇ ಗಾಡಿ ನಾನು ಹೋಡಿಸಬೇಕು ಅಂದರೆ ನನಗೆ ಆಗುತ್ತಿದ್ದ ಭಯ ಅಷ್ಟಿಷ್ಟಲ್ಲ. ದಾರಿಯಲ್ಲಿ ನಡೆಯುವಾಗ ಪಕ್ಕದಲ್ಲಿ ಯಾವುದಾದರೋ ಗಾಡಿ ಸ್ಪೀಡ್ ಆಗಿ ಹೋದರೆ ಸಾಕು, ಭಯವಾಗುತ್ತಿತ್ತು. ಈ ಜನ್ಮದಲ್ಲಿ ನಾನು ಗಾಡಿ ಹೋಡಿಸೋದಿಲ್ಲ, ನನಗೆ ಅಷ್ಟು ಧೈರ್ಯ ಇಲ್ಲ ಎಂದು ಭಾವಿಸಿದ್ದೆ. ನಾನು ಅಂದುಕೊಂಡಂತೆ ಆಗುವುದಾಗಿದ್ದರೆ ಜೀವನ ನನಗೆ ಇಷ್ಟ ಬಂದಂತೆ ಬದಲಿಸಿ ಬಿಡುತ್ತಿದ್ದೆ ಏನೋ. ಆದರೆ ಇದ್ಯಾವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಹಾಗೆ ನಾನು ಕೂಡ ಗಾಡಿ ಹೋಡಿಸೋದು ಕಲಿಯಬೇಕೆನ್ನುವಂತಾಯಿತು.

ನಮ್ಮ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿ ಓಡಿಸಬೇಕಾದರೆ ನನಗಂತು ಅರೆ ಸಾಹಸವೇ ಮಾಡಬೇಕಾಗುತ್ತದ್ದೆ. ಗಾಡಿ ಕಲಿಯಲು ಶುರು ಮಾಡಿದೆ, ಟ್ರೇನರ್ ದಿನವೂ ಬರಲು ಶುರು ಮಾಡಿದರು, ಈಗೆ ಒಂದು ದಿನ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿಯಲ್ಲಿ ಹೋಗುವಾಗ, FM ನಲ್ಲಿ 'ಜೋಗಿ' ಚಿತ್ರದ 'ಹೊಡಿಮಗ ಹೊಡಿಮಗ' ಹಾಡು ಬರುತ್ತಿತ್ತು. ಆಗ ನನ್ನ ಮನಸ್ಸು ನನ್ನ ಪರಿಸ್ತಿತಿ ಎಲ್ಲವು ಸೇರಿ ಈ ಹಾಡನ್ನು ಬೇರೆ ರೀತಿಯಲ್ಲೇ ರೂಪಿಸಿತು. ಆ ರೀಮಿಕ್ಸ್ ಹಾಡು ಹೀಗಿದೆ:

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ
ಈ ರೋಡ ಮೇಲೆ ಬಂದ ಮೇಲೆ ಸಾವೇ ಕಣೋ
ಈ ಕೈನಲ್ ಸ್ಟಿಯರಿಂಗ್ ಹಿಡಿದ ಮೇಲೆ ಭಯವೇ ಕಣೋ

ಮಗ ಸುತ್ಲು ಗಾಡಿ ಕಣ್ಲಾ, ಬರಿ ಹಾರ್ನ್ ಸೌಂಡೆ ಕಣ್ಲಾ, ಜೊತೆಗ್ ಕಿರ್ಚೊ ಟ್ರೇನರ್ ಕಣ್ಲಾ, ಗಾಡಿ ಸಾವಸ್ ವೆ ಬೇಡ ಅನ್ಸ್ತದ್ ಕಣ್ಲಾ, ತುಂಬ ಭಯ ಆಗ್ತದ್ ಕಣ್ಲಾ, ಆದ್ರು ಮುಂದೆ ಹೋಗ್ಲೆ ಬೇಕು ಕಣ್ಲಾ, ಲೇ...

ಕ್ಲಚ್ಚು ಬ್ರೇಕೂ ಗೇರು ಅಂತ ಏನೇನ್ ಐತ್ಕಣ್ಲಾ
ಅಕ್ಸೆಲ್ರೇಟರ್ ಆಮ್ಕ್ ದ್ರೆ ಸಾಕು ಮುಂದಕ್ ಓಡ್ತಾದ್ ಕಣ್ಲಾ
ಯಾವಗ್ ಕ್ಲಚ್ ಅಮ್ಕೊದು, ಯಾವಗ್ ಬ್ರೇಕ್ ಹಾಕೋದು
ಯಾವಗ್ ಗೇರಾನ್ನ ಚೇಂಜ್ ಮಾಡೋದು...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ

ಮಗ ಸಕತ್ ಟ್ರ್ಯಾಫಿಕ್ ಕಣ್ಲಾ, ಪ್ರತಿ ರೋಡ್ಗು ಸಿಗ್ನಲ್ ಕಣ್ಲಾ, ರೆಡ್ ನಿಂದ್ ಗ್ರೀನ್ ಸಿಗ್ನಲ್ ಐತು ಕಣ್ಲಾ , ಸಿಗ್ನಲ್ ನಾಗ್ ಗಾಡಿ ನಿನ್ತ್ ಬಿಡ್ತು ಕಣ್ಲಾ, ಎಲ್ರೂ ಬರಿ ರೇಗೋದೆ ಐತು ಕಣ್ಲಾ, ಯಾಕೊ ಟೈಮೆ ಸರಿ ಇಲ್ಲ್ ಕಣ್ಲಾ, ಲೇ...

ಲೋ ಬೀಮ್ ಹೈ ಬೀಮ್ ಅಂತ ಏನೇನ್ ಬೀಮ್ಗಲೈತ್ ಕಣ್ಲಾ
ಲೆಫ್ಟು ರೈಟು ಇಂಡಿಕೇಟರ್ ಮರೀಬೇಡ್ದಂತ್ಕಣ್ಲಾ
ಸೈಡ್ ಮಿರರ್ನೇ ನೋಡ್ಲ, ರಿಯರ್ ವ್ಯೂ ಮಿರರ್ನೇ ನೋಡ್ಲ
ಇಲ್ಲ ಮುಂದೆ ನೋಡ್ಕೊಂಡು ಹೋಡಿಸ್ಲಾ...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ

Sunday, June 22, 2008

ನನ್ನ ಪುಟ್ಟ angel

ಮಕ್ಕಳು ದೇವರ ರೂಪ. ಆಗೇ ಏಕೆ ಹೇಳುತ್ತಾರೋ ನನಗೆ ಸರಿಯಾಗಿ ತಿಳಿಯದು, ನನಗೆ ತಿಳಿದ ಮಟ್ಟಿಗೆ ಮಕ್ಕಳು ಕಲ್ಮಷವಿಲ್ಲದವರು, ಮೋಸ, ಅಸೂಯೆ ಇಂತ ಯಾವುದೆ ಕೆಟ್ಟತನ ಇಲ್ಲದವರು. ಮುಗ್ಧ ಮನಸ್ಸಿನವರು. ಎಷ್ಟೇ ನೋವಿರಲಿ, ಈ ಮಕ್ಕಳೊಂದಿಗೆ ಕೆಲವು ಕ್ಷಣ ಕಳೆದರೆ ಸಾಕು, ಎಲ್ಲ ನೋವು ಹೋಗಿ ಮನಸ್ಸಿಗೆ ಸಂತೋಷಸಿಗುತ್ತದೆ.
ನನ್ನ ಪುಟ್ಟ ಜಯಂತನು(ನನ್ನ cousin ಮಗ) ಎಲ್ಲ ಮಕ್ಕಳಂತೆ ಮುಗ್ಧ ಮನಸ್ಸುಳ್ಳ ಮಗು. ಇದು ಸ್ವಲ್ಪ ದಿನಗಳ ಹಿಂದೆ ನಡೆದದ್ದು. ಮನಸ್ಸಿಗೆ ಬಹಳ ಬೇಸರವಾಗಿತ್ತು. ಏನು ಮಾಡಲು ಮನಸ್ಸಿಲ್ಲ. ಸರಿ ಜಯಂತನನ್ನು ನೋಡಿ ಬಹಳ ದಿನಗಳಾಗಿದೆ ಹೋಗಿ ನೋಡಿ ಬರೋಣ ಎಂದು ಹೊರಟೆ. ಆಗ ನನಗೆ ಬಂದ ಯೋಚನೆ, ಬಹಳ ತಿಂಗಳಾಗಿದೆ, ಆ ಪುಟ್ಟ ಮಗುವಿಗೆ(ಅವನಿಗೆ 2 ವರ್ಷ ಇರಬೇಕು) ನನ್ನ ನೆನಪಿರುತ್ತದೆಯೆ ಎಂದು. ಅವರ ಮನೆ ಬಾಗಿಲಿಗೆ ಹೋಗುತ್ತಲ್ಲೇ ಪುಟ್ಟ ಹೆಜ್ಜೆ ಇಡುತ್ತ ಹೊರಗೆ ಓಡಿ ಬಂದ. ನನ್ನನ್ನು ನೋಡುತ್ತಲೆ ನಕ್ಕ. ನನ್ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದ. ಅಡಿಗೆ ಮನೆಗೆ ಓಡಿ ಹೋಗಿ, ಅವನ ತಾಯಿಗೆ ಬಾ ಎಂದು ಹೊರಗೆ ಕರೆದುಕೊಂಡು ಬಂದ. ಆಗ ಅವನ ಅಮ್ಮ ಯಾರೋ ಇವರು ನಿನಗೆ ಗೊತ್ತಾ ಎಂದಳು. ಅವನು ನನ್ನ ಬಳಿ ಬಂದು ನಗುತ್ತ ತೊದಲ್ಮಾತಿನಲ್ಲಿ ವಿಜಿ ಎಂದ. ಅದನ್ನು ಕೇಳಿ ಎಂತ ಹುಚ್ಚಿ ನಾನು, ನೆನಪಿರುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತಿದ್ದೆನಲ್ಲ ಎಂದು ಮನಸ್ಸಿನಲ್ಲಿ ನನಗೆ ನಾನೇ ಬೈದುಕೊಂಡೆ. ಅವನು ತನ್ನ ಆಟದ ಸಾಮಾನುಗಳ್ಳನ್ನು ತಂದು ನನ್ನ ಮುಂದೆ ಇಟ್ಟ. ಅವನ ಜೊತೆ ಕೂತು ಅವನೊಂದಿಗೆ ಆಟವಾಡತೊಡಗಿದೆ. ಅವನ ತೊದಲು ಮಾತುಗಳು, ಮಾತಿಗಿಂತ ಹೆಚ್ಚಾಗಿ action ಮಾಡಿ ಎಲ್ಲವನ್ನು ತೋರಿಸೋದು, ಅವನೊಂದಿಗೆ ಇರೋ ಅಷ್ಟು ಹೊತ್ತು, ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ಸರಿ ಈಗ ನಾನು ಮನೆಗೆ ಹೋಗುತ್ತೇನೆ ಎಂದು ಎದ್ದು ಹೊರಟೆ, ಕೂಡಲೇ ಅವನು ನನ್ನ ಕೈ ಹಿಡಿದು ಮತ್ತೆ ಒಳಗೆ ಕರೆದು ಕೊಂಡು ಹೋದ. ಯಾಕೋ ಎಂದರೆ action ಮಾಡುತ್ತಲೆ ಊಟ ಮಾಡು ಅಂತ ತೋರಿಸ ತೊಡಗಿದ. ನಾನು ಅದಕ್ಕೆ ಸರಿ ಊಟ ಮಾಡುತ್ತೇನೆ, ಹೋಗಿ ತಟ್ಟೆಗೆ ಊಟ ಹಾಕಿಕೊಂಡು ಬಾ ಎಂದು ಹೇಳಿದೆ. ಅವನು ಅಡಿಗೆ ಮನೆಗೆ ಹೋಗಿ ಅವನ ಅಮ್ಮನಿಗೆ action ಮಾಡುತ್ತ ನನ್ನನ್ನು ತೋರಿಸಿ ಊಟ ಹಾಕಿಕೊಡು ಎಂದ. ಅವನಮ್ಮ ಇನ್ನೂ ಅಡಿಗೆ ಆಗಿಲ್ಲ ಕಣೋ, ಇರು ಸ್ವಲ್ಪ ಒತ್ತು ಎಂದಳು. ಆದರೆ ಅವನು ಸುಮ್ಮನೇ ಇರಲಿಲ್ಲ, ಅಲ್ಲೆ ಕೆಳಗೆ ಇದ್ದ ತಟ್ಟೆಯನ್ನು ತಂದು ನನ್ನ ಮುಂದೆ ಇಟ್ಟ. ಅವನ ಈ ಪ್ರೀತಿ ಕಂಡು, ಅವನೊಂದಿಗೆ ಇನ್ನಷ್ಟು ಕಾಲ ಕಳೆಯಬೇಕೆಂಬ ಆಸೆಯಾಯಿತು. ಅವನಿಗೆ ಸರಿ ನಾನು ಈಗಲೆ ಹೋಗಲ್ಲ, ಇಲ್ಲೆ ಇರ್ತೀನಿ ಅಂದೇ. ಇವನ ಮುಗ್ಧ ಪ್ರೀತಿ ಇಲ್ಲಿಗೆ ಮುಗಿಯಲಿಲ್ಲ. ಅವನೊಂದಿಗೆ ಮಂಚದ ಮೇಲೆ ಕುಳಿತು ಆಡುತ್ತಿದ್ದೆ. ಆಡುತ್ತಾ ನಾನು ಸರಿ ನನಗೆ ಈಗ ನಿದ್ದೆ ಬರುತ್ತಿದೆ ನಾನು ಮಾಲ್ಗುತ್ತೇನೆ ಎಂದು ಅವನ ಪುಟ್ಟ ಕಾಲ ಮೇಲೆ ನನ್ನ ತಲೆ ಇಟ್ಟೆ. ಅವನು ನನ್ನನ್ನು ಎಬ್ಬಿಸಿ, ಅಲ್ಲಿದ್ದ ದಿಂಬಿನ ಬಳಿ ಹೋಗಿ ಇಲ್ಲಿ ತಲೆ ಇಟ್ಟು ಮಲಗಿಕೊ ಎಂದು ತನ್ನ ಪುಟ್ಟ ಕೈನಲ್ಲಿ ತೋರಿಸತೊಡಗಿದ. ನಾನು ಇದರ ಮೇಲೆ ಮಲಗ ಬೇಕಾ, ಸರಿ ಮಲ್ಗ್ತೀನಿ ಎಂದು ಮಲಗಿದೆ. ಆಗ ಅವನು ಅಲ್ಲೇ ಇದ್ದ bedsheet ತೆಗೆಯಲು ಕಷ್ಟ ಪಡುತ್ತಿದ್ದ. ಯಾಕೋ ಮರಿ ಅದು ಎಂದೆ, ಆಗ ಅವನು ತನ್ನ ತೊದಲು ಮಾತಿನೊಂದಿಗೆ action ಮೂಲಕವೆ ಇದ್ದನ್ನು ಹೊದ್ದುಕೊಂಡು ಮಲಗಿಕೊ ಎಂದ. ಈ ಮುಗ್ಧ ಮನಸ್ಸಿನ ಮಗುವಿನ ಪ್ರೀತಿ ಕಂಡು ನನಗೆ ತಿಳಿಯದಂತೆ ನನ್ನ ಕಣ್ತುಂಬಿ ಬಂತು. ಅವನ ಈ ಪ್ರೀತಿ ಬೇಜಾರಾಗಿದ್ದ ನನ್ನ ಮನಸ್ಸಿಗೆ ಅದೆಷ್ಟು ಕುಶಿ ಕೊಟ್ಟಿತ್ತೋ ನನಗೆ ಹೇಳಲು ಅಸಾಧ್ಯ. ಮನೆಯಿಂದ ಹೊರಟಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕರೆ ಸಾಕು ಎಂದು ಹೊರಟ ನನಗೆ, ಪ್ರೀತಿಯ ಸಾಗರವೇ ಸಿಕ್ಕಿತ್ತೇನೋ ಎನಿಸಿತು. ನಿಜವಾಗಿಯು ಮಕ್ಕಳು ದೇವರ ರೂಪವೇ ಇರಬೇಕು. ಮನಸ್ಸಿನಲ್ಲಿ ಎಷ್ಟೇ ನೋವಿರಲಿ, ಎಷ್ಟೇ ಬೇಸರವಾಗಿರಲಿ, ಮಕ್ಕಳೊಂದಿಗೆ ಸ್ವಲ್ಪ ಒತ್ತು ಕಳೆದರೆ ಸಾಕು, ಎಂತ ನೋವೇ ಹಾಗಿರಲಿ ಅದನ್ನು ಕ್ಷಣದಲ್ಲಿ ಮರೆಯುವಂತೆ ಮಾಡುವ ಮನಸ್ಸು, ಶಕ್ತಿ ಈ ಮಕ್ಕಳಲ್ಲಿ ಇದೆ. ಅಂದಿನಿಂದ ವಾರಕ್ಕೆ ಹೊಮ್ಮೆಯಾದರೊ ಈ ನನ್ನ ಪುಟ್ಟ ಜಯಂತನನ್ನು ನಾನು ನೋಡಬೇಕು, ಅವನೊಂದಿಗೆ ಆಟವಾಡಬೇಕು, ನನಗೆ ತಿಳಿಯದಂತೆ ಅವನಲ್ಲಿ ಒಂದು ಅನುಬಂಧ ಬೆಳೆದು ಬಿಟ್ಟಿದೆ, ಪ್ರೀತಿಯ ಬಂದ, ಅವನೊಂದಿಗೆ ಎಷ್ಟು ಕಾಲ ಕಳೆದರು ಕಮ್ಮಿಯೇ ಎನಿಸುತ್ತದ್ದೆ. ಈ ನನ್ನ ಪುಟ್ಟ ಮಗು ಯಾವಾಗಲು ಸಂತೋಷವಾಗಿರಬೇಕು, ಈ ಮುಗ್ಧ ಮನಸ್ಸು ಎಂದಿಗೂ ಕಲ್ಮಷವಾಗಬಾರದು, ಮೋಸ, ಅಸೂಯೆ ಇಂತ ಯಾವುದೆ ಕೆಟ್ತತನ ಅವನ ಬಳಿ ಸುಳಿಯಲುಬಾರದು. ಯಾವಾಗಲು ಅವನು ನಗುತ್ತ ಎಲ್ಲರನ್ನೂ ನಗಿಸುತ್ತಾ ಸುಕವಾಗಿರಬೇಕು ಎಂದು ಆಶಿಸುತ್ತೇನೆ.

Friday, May 16, 2008

Sweet Memories


I'm sure most of them will agree that the best days of our life is our school days. If there was a choice we would be happy to get back to the good old days. But there is no rewind button in life which is the sad part.

Its been 10 yrs now that i have been out of school. UUuuhhhh 10 yrs, just cant believe it. For me my school days are really special may be because I spent 13 yrs in the same school(Bethesda School) with almost same people, same friends. After school, some of us were in touch and some lost. Life is all about loosing touch with old people and meeting new people and if we are lucky enough then we manage to still keep in touch with some of them. On the last day of our school, we laughed, cried, took snaps, took autographs, promised to keep in touch, planned to meet up every month or once in two months. Once out of school, as days passed, slowly the promise we made was forgotten and so were the plans we did. Days just flew off, college life went so fast and now going on with my professional life. And today most of them are into some field or the other, doctor, lawyer, engineer, hr, travels and so on and ofcourse some are married too.

I used to go to school even after finishing my school life, but very rarely. This year one of my cousin was graduating from the same school, so I went to attend her graduation function. Everything almost seemed like a replay, few years back I was there standing with my classmates on the stage, with a lit candle in my hand. I still have that candle with me and I have not lit it after that day. Most of the teachers are changed, very few whom I know. My kannada teacher seeing me asked ‘Are you remembering your graduation day’, I don’t know why my eyes were filled when she asked that and I said Yes Ma'am and that moment I realized its been 10 years and these 10 years went so fast and I still feel I’m out of school just now. That’s when I thought we school friends should have a gettogether, let me plan up for the same.

Well, but after that weekend, back with work, gettogether plan took a backseat. After few days my good old school friend gave me a call and as we spoke, she told lets have a gettogether, same thing was going on in her mind too. Finally, I decided yes we have to have one and let me plan for the same. After that my first priority was to get all my school friends together in one place. So the planning began. First thing was to contact everyone, but I had very few contacts. So started collecting contact numbers of whosoever possible and starting making a call. The plan was to meet on a weekend after a month either go out on a short trip or atleast meet up for lunch. Some of them I was speaking after years and they were surprised to hear me and also happy with the plan. Finally everyone agreed with the plan and next was where to meet up and where to go. I had decided no matter where we go that day, but meeting place will be our school.

As days passed, plans of going to any place kept changing, first Nandi Hills, then a Resort, then Wonderla and again back to Resort. But the meeting place was fixed to be the School. Finally 2 days prior to meeting, some of them said they cannot make it for the day due to various reasons, I was really hurt, felt bad, but could not do anything about it. I made up my mind no matter what, even if one person comes also fine, we have to meet. Finally it was decided to meet near school, then go for lunch and then to one of my friend’s place.

Finally the day came, I wasn’t sure finally how many will turn up. One by one started coming near the school, some of them were there before me and I was very happy to see them. Most of them I saw after years, and some I had met very rarely in a function and that would be any of our school friend’s marriage. Everyone assembled in front of school, I was happy to see most of them turning up and some of them who said can’t make it also came. Then it was time for Girl’s Day Out.

One of my friend booked seats for lunch in one of the hotel near infantry road. We all left to have lunch there. Finally we reached the hotel, and the best part was my friend forgot that she had booked in a hotel and took us to another one and realised it later. So made a call, cancelled the booking and headed inside the hotel to have lunch. Then started girls talk which went on non-stop and yes inbetween had lunch too. After lunch, headed to one of my friend’s place. I saw her mom, granny after 10 years. Her mom was still the same, very friendly and a great cook. We all sat, relaxed, talked and talked, pulled each other’s leg, talked of everything possible whether it makes sense or not. Meantime Aunt used to send snacks to eat for us one after the other. Very soon the day was ending, how time flew, never realized it. I didn’t want the day to end, but I couldn’t hold on the time. Finally everyone decided to leave, but before that came another plan, yes that was for the next gettogether. We decided very soon we will meet up again and moved our way back to home.

Now again when we’ll meet, will everyone make it or not, no one knows, but those sweet memories will always be there to cherish with us and I’m sure there will be more to come.

Today, I want to thank all my friends (from all aspects of life) for being part of such sweet memories because without you it would never be sweet and never would l be able to treasure it throughout my life. Thank You Friends.

Thursday, April 10, 2008

ಟೂಸ್ ಸ್ ಸ್ ಸ್ ಸ್ ಸ್ ಸ್...ಟೈರ್ ಪಂಚರ್

ವಾಹನ ಇದ್ದ ಮೇಲೆ ಟೈರ್ ಪಂಚರ್ ಆಗೋದು ಸರ್ವೇ ಸಾಮಾನ್ಯ. ಆದರೆ ಬೇಕೆಂದಲೇ ಟೈರ್ ಪಂಚರ್ ಮಾಡಿದರೆ?
ಟೈರ್ ಪಂಚರ್ ಆದಾಗಲೆಲ್ಲ ನೆನಪಿಗೆ ಬರೋದು ನನ್ನ ಬಾಲ್ಯದ ಆಟ. ನನಗೆ 6 ವರ್ಷ ಇರಬಹುದು. ನಮ್ಮ ಪಕ್ಕದ ಮನೆಯವರು ಟ್ರಾವೆಲ್ಸ್ ನಡೆಸುತ್ತಿದ್ದರು. ಯಾವಾಗಲು ರಸ್ತೆಯ ಕೊನೆಯಲ್ಲಿ ಟ್ರಾವೆಲ್ಸಿನ ಕಾರ್, ವ್ಯಾನ್ ಗಳು ನಿಂತಿರುತ್ತಿದ್ದವು. ಒಮ್ಮೆ ನನ್ನ ಅಣ್ಣ ವ್ಯಾನ್ ಟೈರ್ ಬಳಿ ಕುಳಿತು ಏನೋ ಮಾಡುತ್ತಿದ್ದ. ಅದನ್ನು ಗಮನಿಸಿದ ನಾನು ಅವನು ಅಲ್ಲಿಂದ ಹೋದ ಮೇಲೆ ಅವನು ಮಾಡಿದ ಹಾಗೆ ಒಂದು ಚಿಕ್ಕ ಕಡ್ಡಿಯನ್ನು ತೆಗೆದುಕೊಂಡು ಟೈರ್ ನಿಂದ ಬ್ಲೋ ತೆಗೆಯ ತೊಡಗಿದೆ. ಆಗ ಟುಸ್ ಸ್ ಸ್ ಎಂದು ಸದ್ದು ಬಂದಿತು. ಮೊದಲಿಗೆ ಭಯವಾಹಿತು, ಆದರೆ ಸ್ವಲ್ಪ ಸಮಯದ ನಂತರ ಈ ಆಟ ಚೆನ್ನಾಗಿದೆ ಎನ್ನಿಸಿತು. ಅಂದಿನಿಂದ ಟೈರ್ ನಿಂದ ಬ್ಲೋ ತೆಗೆಯೋದು ನನ್ನ ಆಟವಾಹಿತು. ಬ್ಲೋ ತೆಗೆದ ಮೇಲೆ ಟೈರ್ ಪಂಚರ್ ಹಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ, ಅದರ ಅರಿವು ಸಹ ನನಗೆ ಇರಲಿಲ್ಲ, ಆದರೆ ಹಾಗೆ ಮಾಡುವುದು ನನಗೆ ಬಹಳವಾಗಿ ಇಷ್ಟವಾಗಿತ್ತು.
ಆದರೆ ಈ ನನ್ನ ಆಟ ಬಹಳ ದಿನ ನಡೆಯಲಿಲ್ಲ. ಒಂದು ದಿನ ಮಧ್ಯಾನ ಶಾಲೆ ಮುಗಿಸಿ ಬಂದ ಮೇಲೆ ರಸ್ತೆಯ ಕೊನೆಯಲ್ಲಿ ನಿಂತಿದ್ದ ವ್ಯಾನ್ ಬ್ಲೋ ತೆಗೆಯಲು ಹೋದೆ. ನನ್ನ ದುರಾದೃಷ್ಟವೋ ಏನೊ ವ್ಯಾನ್ ಒಳಗೆ ಮಲಗಿದ್ದ ಡ್ರೈವರ್ ನಾನು ಗಾಡಿಯಿಂದ ಬ್ಲೋ ತೆಗೆಯೋದನ್ನ ನೋಡಿಬಿಟ್ಟ. ನನ್ನನ್ನು ಗದರಿಸಿ, ಅಲ್ಲಿಂದ ನನ್ನ ಅಮ್ಮನ ಬಳಿ ಕರೆದು ಕೊಂಡು ಬಂದು ನನ್ನ ಬಗ್ಗೆ ಛಾಡಿ ಹೇಳತೊಡಗಿದನು. ಅಮ್ಮ ಟೈರ್ ಯಾಕೆ ಪಂಚರ್ ಮಾಡ್ತಿದ್ದೆ ಅಂತ ನನ್ನನ್ನು ಕೇಳಿದರು. ಹಾಗೆಂದರೇನು ಎಂದು ತಿಳಿಯದ ನಾನು ಏನು ಹೇಳದೆ ಸುಮ್ಮನೆ ನಿಂತಿದ್ದೆ. ಆ ಡ್ರೈವರ್ ಮೇಲೆ ಬಹಳ ಕೋಪ ಬರುತ್ತಿತ್ತು. ನಾನು ಆಟವಾಡಿಕೊಂಡಿದ್ದರೇ ಇವನಿಗೇನು ಪ್ರಾಬ್ಲಮ್ ಎಂದು ಮನಸ್ಸಿನಲ್ಲೆ ಗೊಣಗತೊಡಗಿದೆನು. ಅಂದಿನಿಂದ ಯಾರು ಇಲ್ಲದ ಸಮಯದಲ್ಲಿ ಹೋಗಿ ಟೈರ್ ಬ್ಲೋ ತೆಗೆದು ಬಂದುಬಿಡುತ್ತಿದ್ದೆ. ಆ ಟೂಸ್ ಸ್ ಸ್ ಸದ್ದು ಕೇಳಲು ನನಗೆ ಬಹಳ ಇಷ್ಟ. ಈ ನನ್ನ ಆಟ ಆಗಾಗ ನಡೆಯುತ್ತಲ್ಲೇ ಇರುತ್ತಿತ್ತು. ಕಾಲ ಕಳೆದಂತೆ ಟೈರ್ ಬ್ಲೋ ತೆಗೆದರೆ ಏನಾಗುವುದು, ಟೈರ್ ಪಂಚರ್ ಅಂದರೇನು, ಪಂಚರ್ ಆದರೆ ಏನಾಗುವುದು ಎಂದು ತಿಳಿದೆ. ತಿಳಿದ ಮೇಲೆ ಈ ನನ್ನ ಆಟ ಕೊನೆ ಕಂಡಿತು.
ಈಗಲೂ ಕೆಲವೊಮ್ಮೆ ಟೈರ್ ಪಂಚರ್ ಮಾಡಲೇ ಎಂದುಕೊಳ್ಳುತ್ತೇನೆ, ಆದರೆ ಮಾಡಿದ ಮೇಲೆ ಆಗುವ ತೊಂದರೆ ನೆನೆದು ಸುಮ್ಮನಾಗುತ್ತೇನೆ. ಬಾಲ್ಯದ ಸವಿ ನೆನಪುಗಳನ್ನು ನೆನೆದು ಸಂತೋಷಿಸುತ್ತೇನೆ.

Friday, March 28, 2008

Life is Beautiful.. isn't it?

Each individual has his/her own meaning for life. For some :

Life is what we live.
Life is like a icecream, enjoy it before it melts.
Life isn't fair. It's just fairer than death, that's all.
Life is what happens to you while you're busy making other plans.

If you go on searching, you will find a lot of meanings.

But the truth is life doesn't have any specific definition. But still I have my own definition for it. Well, I say life is beautiful, but what does that really mean?
Does it mean.

Life is :
b – betrayal
e – ego
a – anger
u – uncertain
t – troublesome
i – irritation
f – frustration
u – unlucky
l – lose

Or

Life is
b – bright
e – enjoyment
a – adventurous
u – unity
t
– trust
i – interesting
f
– fulfilling
u
– understanding
l
– love

It doesn't mean anything in specific. Its a mixture of both. Life is beautiful with all the qualities hidden in it. If you get to see ones trust and love, you will also get to see ones betrayal. If its troublesome then it also has enjoyment. If its irritating and frustrating then on other hand its also interesting and adventurous. If there is lose in one then there is fulfillment in the other. Nothing is perfect. Life cannot be complete with only one specific quality filled in it, its complete only when you get to see all these qualities and when you learn to live facing them. Its all about how you tackle it, how you take it.

Truly, LIFE IS BEAUTIFUL

Thursday, March 20, 2008

ಇದು ಯಾರು ಬರೆದ ಕೋಡ್...

ಸಾಫ್ಟ್­ ವೇರ್ ಇಂಜಿನಿಯರ್ ­ಕೆಲಸದಲ್ಲಿರುವವರಿಗೆ ­ಬಹಳ ­ಕಷ್ಟವಾದ ­ಕೆಲಸ ­ಏನೆಂದರೆ ­ಬೇರೆಯವರು ­ಬರೆದ ­ಕೋಡ್ ­ಅರ್ಥ ­ಮಾಡಿಕೊಳ್ಳೋದು. ­ಅದ್ರಲ್ಲೂ ­ಡಾಕ್ಯುಮೆಂಟ್ಸ್ ­ಇಲ್ಲ, ­ಕೋಡ್ ­ನಲ್ಲಿ ­ಕಾಮೆಂಟ್ಸ್ ­ಇಲ್ಲ ­ಅಂತ ­ಆದ್ರೆ, ­ಕೋಡ್ ­ಲಾಜಿಕ್ ­ಅರ್ಥ ಮಾಡ್ಕೊಳ್ಳೋದಕ್ಕೆ ­ಪರ್ದಾಡಬೇಕು. ­ಅರ್ಥ ­ಹಾಗ್ಲಿಲ್ಲ ­ಅಂದ್ರೆ ­ಅದನ್ನ ­ಬರೆದವರಿಗೆ ­ಎಷ್ಟು ­ಶಾಪ ­ಆಗ್ತಿವೋ. ­ನಾನ್ ­ಮಾಡಿದ್ದು ­ಅದ್ದನೆ. ­ಕೋಡ್ ­ಅನಲೈಸ್ ­ಮಾಡ್ತಾ ­ಮುಂಗಾರು ­ಮಳೆ ­ಚಿತ್ರದ ­ಹಾಡನ್ನು ­ಕೇಳ್ತಿದೆ.. ­ಆಗ ­ರೂಪಗೊಂಡ ­ನನ್ನ ­ರೀಮಿಕ್ಸ್ ­ಹಾಡು:

ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ನೀನು ­ಬರೆದ ­ಕೋಡನ್ನು ­ನಾ ­ಅನಲೈಸ್ ­ಮಾಡ್ತಿಯೆನು
ನಿನ್ನಿಂದ ­ನಾ ­ಇಂದು ­ತಲೆಕೆಟ್ಟು ­ಕೂತಿ­ಯೆನು
ನೀ ­ಯಾರೋ ­ಕಾಣೆನು ­ಸಿಕಿದ್ರೆ ­ಬಿಡೆನು
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ

­ಕಾಮೆಂಟ್ ­ಗಳೆ ­ಇಲ್ಲದ ­ಕೋಡು
ಆ ­ಕಾಮೆಂಟ್ ­ಗಳೆ ­ಇಲ್ಲದ ­ಕೋಡು
ಒಂದು ­­ಡಾಕ್ಯುಮೆಂಟ್ ­ಸಹ ­ ­­ನೀ ಬರೆಯದೇಹೋದೆ
ಕೋಡ್ ­ಎಲ್ಲಿಂ­ದ್ ­ಶು­ರೂ ­ಕೋಡ್ ­ಎಲ್ಲಿಗ್ ­ಕೊನೇ

ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ನೀನು ­ಬರೆದ ­ಕೋಡನ್ನು ­ನಾ ­ಅನಲೈಸ್ ­ಮಾಡ್ತಿಯೆನು
ನಿನ್ನಿಂದ ­ನಾ ­ಇಂದು ­ತಲೆಕೆಟ್ಟು ­ಕೂತಿ­ಯೆನು
ನೀ ­ಯಾರೋ ­ಕಾಣೆನು ­ಸಿಕಿದ್ರೆ ­ಬಿಡೆನು
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ

ಈ ­ಕೋಡಿಂ­ದು ­ಲಾಜಿಕ್ ­ಏನು
ಆ ಈ ­ಕೋಡಿಂ­ದು ­ಲಾಜಿಕ್ ­ಏನು
ಅರ್ಥ ­ಮಾಡ್ಕೊಳ್ಳೋಕೆ ­ಟ್ರೈ ­ಮಾಡಿ ­ಮಾಡಿ
ತಾಳ್ಮೆ ­ಕಳ್ಕೊಂ­ಡೈ­ತು ­ತಲೆ ­ಕೆಡಿಸ್ಕೊಂಡೈ­ತು

ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ
ನೀನು ­ಬರೆದ ­ಕೋಡನ್ನು ­ನಾ ­ಅನಲೈಸ್ ­ಮಾಡ್ತಿಯೆನು
ನಿನ್ನಿಂದ ­ನಾ ­ಇಂದು ­ತಲೆಕೆಟ್ಟು ­ಕೂತಿ­ಯೆನು
ನೀ ­ಯಾರೋ ­ಕಾಣೆನು ­ಸಿಕಿದ್ರೆ ­ಬಿಡೆನು
ಒಂದೇ ­ಒಂದು ­ಸಾರಿ ­ಕಣ್ಮುಂದೆ ­ಬಾರೋ

Thursday, March 13, 2008

Jerry Linenger, The Astronaut I met

Jerry Linenger, Astronaut flew on STS-64 (September 9-20, 1994) aboard the Space Shuttle Discovery. Mission highlights included: first use of lasers for environmental research; deployment and retrieval of a solar science satellite; robotic processing of semiconductors; use of an RMS-attached boom for jet thruster research; first untethered spacewalk in 10 years to test a self-rescue jetpack.

Wondering as to why I’m speaking about him, well its only because I got an opportunity to meet him. Truly speaking, I had never heard about him until I met him recently. Few days back there was our company relaunch in Boston, USA and I was there to be a part of the event. And the event’s special speaker was Jerry Linenger, the Astronaut. Till then I knew nothing about him, but when he was introduced to the crowd, I was very excited to know more about him. First time I was seeing an astronaut and hearing him speak right in front of me. He spoke about his space adventure, how it was to spend 5 months in space, away from everyone. And there was one thing which he told which made me start to think. When he was in space, fire broke in the shuttle and they were on oxygen support which could last for 1½ hr. They were doing everything possible to get the fire off but nothing was happening. Almost an hour had gone and still they could not get the fire off. Jerry had almost lost the hope and he told ‘Sorry Son, sorry Catherine(his wife), sorry people, I’m letting u all down, I’m dying without completing the task for which I was here, but still I will try till the end’. These words made me think, being an Astronaut, he has already made his family and people happy and proud, he has achieved so much in life that many of them only dream of and his last words was to tell sorry that he is letting everyone down. If he feels sorry even after achieving so much, what have we done in life. What should we say, I had no answer. I was just wondering and trying to find an answer. Well coming to what happened next with him, they were able to get the fire off and that night he slept like a baby. He told whatever worries you may have, but when you go to bed, leave behind all the worries, take everything that happens has a learning, don’t think anything at the end of the day, just sleep like a baby and start the next day like a new day, like a new birth.

It was indeed a great day and a great opportunity that I got to hear an Astronaut’s experience in his own words. We crib for each and everything that happens in our life, but when we see such people, I realize there is still a lot left in our life. We may not be as great as him, but we can try and do our best in whatever we do and bring the best out of us. All we need to do is take whatever happens in life as a learning and start each day as a new day. Hope I can live my life like this.

Thursday, February 28, 2008

D.L ಎಲ್ಲಿ ಸಾರ್....[F.I.R ಸಂಚಿಕೆ]

[­ಸೂಚನೆ: ­ಇದು ­ನನ್ನ ­ಮೊದಲನೆ ­­ಲೇಖನ. ­­ತಪ್ಪಿದ್ದಲ್ಲಿ ­ಕ್ಷಮೆ ­ಇರಲಿ]

ಕೊಲೆ, ಮೋಸ, ದರೋಡೆ... ಎಲ್ಲಿ ನೋಡಿದರು ಬರೀ ಇದೆ ಸುದ್ದಿಗಳು. ಹೀಗಂತು ಎಲ್ಲಾ ಚ್ಯಾನೆಲ್ ಗಳಲ್ಲು ಇದರ ಬಗ್ಗೆ ಒಂದು ಕಾರ್ಯಕ್ರಮವನ್ನೇ ಶುರುಮಾಡಿದ್ದಾರೆ. ಉದಯ ಟಿ.ವಿ ಯಲ್ಲಿ ಕ್ರೈಮ್ ಸ್ಟೋರಿ, ಟಿ.ವಿ 9 ನಲ್ಲಿ ವಾರೆಂಟ್, ಈ ಟಿ.ವಿ ಯಲ್ಲಿ ಕ್ರೈಮ್ ಡೈರಿ, ಸುವರ್ಣ ಚ್ಯಾನೆಲ್ ನಲ್ಲಿ F.I.R. ನಮ್ಮ ಮನೆಯಲ್ಲಿ ಕೆಲವೊಮ್ಮೆ ಈ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರೆ. ನಾನಂತು ಇದನೆಲ್ಲ ಯಾಕಾದರೋ ತೋರಿಸುತ್ತಾರೋ, ­ಇವರಿಗೆ ­ಬೇರೆ ­ಏನು ­ಸಿಗುವುದಿಲ್ಲವೇ ­ಅಂತ ­ಮನಸಿನಲ್ಲೇ ­ಇದನ್ನು ­ತೋರಿಸುವರಿಗೆ ­ಶಾಪವಾಕುತ್ತಿರುತ್ತೇನೆ. ­ಇಂತ ­ಯಾವುದೆ ­ಕಾರ್ಯಕ್ರಮ ­ಬಂದರೆ ಅಲ್ಲಿಂದ ­ಎದ್ದು ­ನನ್ನ ­ರೂಮ್ ­ಗೆ ­ಹೋಗುತ್ತೇನೆ. ­ಆದರೆ ­ಮೊನ್ನೆ F.I.R ನಲ್ಲಿ ಒಂದು ­ಹೊಸದಾದ ­ವಿಷಯದ ­ಬಗ್ಗೆ ­ತೋರಿಸಿದರು. ­ಅದು ­ಏನು ­ಗೊತ್ತೆ - ­ ಸಾಮಾನ್ಯ ­ಜನರು ­Driving ­License ­ಇಲ್ಲದೆ ­ವಾಹನ ಚಲಿಸುತ್ತಿದ್ದರೆ ­ಅಥವಾ ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸಿದರೆ ­ನಮ್ಮ ­so ­called ­Traffic ­Police ­ಮಾಡುವುದು ­ಏನು? ­Fine ­ಹಾಕುವುದು ­ಅಥವಾ ­Something(­ಲಂಚಾ) ­ತಗೊಂಡು ­ಅವರನ್ನು ಬಿಡುವುದು. ­ಇದು ­ಎಲ್ಲರಿಗೂ ­ಗೊತ್ತಿರುವುದೆ. ­ಆದರೆ ­ಈ ­ಸಂಚಿಕೆಯಲ್ಲಿ ­different ­ಏನು ­ಗೊತ್ತೆ - ­ನಮ್ಮ ­so ­called ­ಟ್ರ್ಯಾಫಿಕ್ ­ಪೋಲೀಸ್ ­ಕೂಡ ­Rules ­And ­Regulations ­follow ­ಮಾಡ್ತಾರ? ­ಅವರ ­ಬಳಿ ­D.L ಇರುತ್ತದೆಯೇ? ­ಅವರು ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸುತ್ತಾರಾ? ಈ ­ವಿಷಯದ ­ಮೇಲೆ ­F.I.R ­ತಂಡದವರು ­ಮಾಡಿದ ­ತನಿಕೆ ­ಪ್ರಕಾರ ­ಶೇಕಡ 100 ­ಕ್ಕೆ 70 ­ರಷ್ಟು ­ಜನರು (­ಟ್ರ್ಯಾಫಿಕ್ ­Police ­ಮತ್ತು ಸರ್ಕಾರಿ ­ವಾಹನ ­ಚಲಿಸುವವರು) ­No ­Parking ­ಸ್ಥಳದಲ್ಲಿ ­ವಾಹನ ­ನಿಲ್ಲಿಸಿದವರು, ­D.L ­ಇಲ್ಲದೆ ­ವಾಹನ ­ಚಲಿಸುವವರು. ಸಂಚಿಕೆ ­Topic ­ಕೇಳಿ ­­ಈ ­ಕಾರ್ಯಕ್ರಮವನ್ನು ­ನೋಡಲೇಬೇಕೆಂದು ­ನಿರ್ಧರಿಸಿ ­ಟಿ.­ವಿ ಮುಂದೆ ­ಕುಳಿತೆ.

F.I.R ­ತಂಡದವರು ­ಹಲವಾರು ­ಟ್ರ್ಯಾಫಿಕ್ ­ಪೋಲೀಸ್­ ರ ­ಬಳಿ ­ಹೋಗಿ ­D.L ­ತೋರಿಸಲು ­ಕೇಳಿದರು. ­ಅಬ್ಬಬ್ಬ, ­ಅದಕ್ಕೆ ­ಅವರು ­ಕೊಟ್ಟ ­ಉತ್ತರ, ­ಕಾರಣ ­ಕೇಳಬೇಕು. ­ಕೆಲವು ­ನಿದರ್ಶನಗಳು ­ಹೀಗಿವೆ. ­ಮೊದಲಿಗೆ ­ಮಲ್ಲೇಶ್ವರಾಂ ­ಟ್ರ್ಯಾಫಿಕ್ ­ಪೋಲೀಸ್ ­ನವರನ್ನ ­D.L ­ತೋರಿಸಲು ­F.I.R ತಂಡದವರು ಕೇಳಿದರೆ ­ಅವರು ­ಕೊಟ್ಟ ­ಉತ್ತರ '­ಇಲ್ಲ ­Sir, ­ಮನೆಯಲ್ಲಿ ­ಮರೆತು ­ಬಿಟ್ಟು ­ಬಂದಿದ್ದೇನೆ' ­ಎಂದು. ­ಇನ್ನೊಬ್ಬ ­ಪೋಲೀಸ್ ­ನ ­ಕೇಳಿದರೆ ­D.L ­ಇದೆ ­ಸಾರ್, ­ಅದು ­ಇಲ್ಲದೆ ­ನಮಗೆ ­ಸರ್ಕಾರದವರು ­ವಾಹನ ­ಕೊಡುವುದಿಲ್ಲ ­ಎಂದು ­ಹೇಳಿದರು. ­O.K ­ಸ್ವಾಮಿ ­D.L ­ತೋರಿಸಿ ­ಎಂದರೆ ­Station ­ನಲ್ಲಿ ­ಇದೆ ­ಎಂದರು. ­ಸಾಮಾನ್ಯ ­ಜನರು ­ಹೀಗೆ ­ಉತ್ತರ ­ಕೊಟ್ಟರೆ ­ಸುಮ್ಮನೆ ­ಬಿಡ್ತೀರಾ ­ಸರ್ ­ಅಂತ ­ಕೇಳಿದರೆ ­ಅದಕ್ಕೆ ­ನಮ್ಮ ­ಪೋಲೀಸ್ ­ಕೊಟ್ಟ ­ಉತ್ತರ - '­Station ­ಗೆ ­D.L ­ತಂದು ­ತೋರಿಸಲು ­­ಹೇಳ್ತಿವಿ, ­ತಂದು ­ತೋರಿಸಿದರೆ ­ಫೈನ್ ­ಹಾಕದೆ ­ಬಿಟ್ಟುಬಿಡುತ್ತೇವೆ' ­ಅಂತ. ­ಅದು ­ಎಷ್ಟು ­ಮಟ್ಟಿಗೆ ­ನಿಜವೋ, ­ಸುಳ್ಳೋ ­ಎಲ್ಲರಿಗೂ ­ಗೊತ್ತು. ಆರ್. ­ಟಿ ­ನಗರ್ ­ಟ್ರ್ಯಾಫಿಕ್ ­ಪೋಲೀಸ್ ­ಮಲ್ಲೇಶ್ವರಾಂ ­ಸ್ಟೇಶನ್ ­ಗೆ ­ಬರ್ತಿದ್ರು. ­ಅವರನ್ನ ­ಡಿ. ­ಎಲ್ ­ತೋರಿಸಲು ­ಕೇಳಿದ್ದಕ್ಕೆ ­ಆರ್. ­ಟಿ ­ನಗರ್ ­ಸ್ಟೇಶನ್ ­ನಲ್ಲಿ ­ಪರ್ಸ್ ­ಬಿಟ್ಟಿದೀನಿ, ­ಈಗ ­ಅರ್ಜೆಂಟ್ ­ಮೀಟಿಂಗ್ ­ಇದೆ ­ಅಂತ ­ಹೇಳುತ್ತಾ ­ನಿಲ್ಲದೇ ­ಹೊರಟೆ ­ಬಿಟ್ಟರು. ­ಆದರೆ ­ಅವರು ­ಸ್ವಲ್ಪ ­ಮುಂದೆ ­ಹೋಗಿ ­ಜೇಬಿನಿಂದ ­ಪರ್ಸ್ ­ತೆಗೆದುದನ್ನು ­ಚ್ಯಾನೆಲ್ ­ನವರು ­ಮತ್ತೆ ­ಮತ್ತೆ ­ತೋರಿಸುತ್ತಿದ್ದರು. ಮಾತೊಬ್ಬ ­ಟ್ರ್ಯಾಫಿಕ್ ­ಪೋಲೀಸ್ ­ಕಥೆ ­ಕೇಳಿ. ಮಾಗಡಿ ­ಟ್ರ್ಯಾಫಿಕ್ ­ಪೋಲೀಸ್ ­ವಿಜಯನಗರದ ­ಬಳಿ ­ನೋ ­ಪಾರ್ಕಿಂಗ್ ­ಸ್ಥಳದಲ್ಲಿ ­ವಾಹನವನ್ನು ­ನಿಲ್ಲಿಸಿದ್ದರು. ­F.I.R ­ನವರು '­ಏನಿದು ­ಸರ್, ­ನೋ ­ಪಾರ್ಕಿಂಗ್ ­ನಲ್ಲಿ ­ವಾಹನ ­ನಿಲ್ಲಿಸಿದ್ದೀರಾ ­ಸರಿಯೇ' ­ಎಂದು ­ಕೇಳಿದ್ದಕ್ಕೆ ­ಅವರು ­ಹೇಳಿದ್ದು '­ಹೌ ­ದು ­ಸರ್ ­ನಿಲ್ಲಿಸಬಾರದು, ­ಇದು ­ತಪ್ಪೇ,­ಆದರೆ ­ಜಸ್ಟ್ 2 ­ನಿಮಿಷದ ­ಕೆಲಸವಿತ್ತು ­ಅಷ್ಟೇ, ­ಅದಕ್ಕೆ ­ನಿಲ್ಲಿಸಿದ್ದೆ'. ­­F.I.R ­ನವರು '­ನಾವು ­ಆಗಾದರೆ ­ನಿಲ್ಲಿಸಬಹುದೆ' ­ಎಂದು ­ಕೇಳಿದರೆ '­ಬೇಡ ­ಸರ್ ­ಪ್ಲೀಸ್, ­ಆಗೇ ­ಮಾಡಬೇಡಿ' ­ಎಂದು ­ಹೇಳಿದರು. ­ಹೋಗ್ಲಿ ­D.L ­ತೋರಿಸಿ ­ಅಂದರೆ '­ನೆನ್ನೆ ­ಮಳೆ ­ಬಂತಲ್ಲ ­ಸರ್, ­ಶರ್ಟ್ ­ನೆನೆದಿತ್ತು ­ಅದರಲ್ಲೇ ­D.L ­ಸೇರಿಕೊಂಡಿದೆ' ­ಅಂತ ­ಕಾರಣ ­ಕೊಡಲು ­ಶುರು ­ಮಾಡಿದರು. ­ಅಷ್ಟರಲ್ಲಿ ­ಅಲ್ಲೇ ­ಇದ್ದ ­ಒಬ್ಬ ­ವ್ಯಕ್ತಿ '­ಎನ್ ­ಸರ್, ­ಇದು ­ಸರಿನಾ, ­ಕಳೆದ ­ವಾರ ­ನಾನು ­helmet ­ಹಾಕಿಲ್ಲ ­ಅಂತ ­ಇದ್ದ 50 ­ರೂಪಾಯಿಯನ್ನು ­ಕಿತ್ತುಕೊಂಡಿರಿ, ­ಈಗ ­ನಿಮಗೆ ­ಏನು ­ಮಾಡಬೇಕು' ­ಎಂದು ­ಕೇಳಿದನು. ­ಆ ­ಟ್ರ್ಯಾಫಿಕ್ ­ಪೋಲೀಸ್ '­ಇವತ್ತು ­ಬೆಳಗೆ ­ಯಾರ ­ಮುಖ ­ನೋಡಿದೆನೋ ­ಏನೋ, ­ನನ್ನ 12 ­ವರ್ಷದ ­ಸರ್ವಿಸ್ ­ನಲ್ಲಿ ­ಯಾವತ್ತೂ ­ಈ ­ರೀತಿ ­ಹಾಗಿರಲಿಲ್ಲ' ­ಎಂದು ­ಹೇಳಿಕೊಂಡು ­ಅಲ್ಲಿಂದ ­ಜಾಗ ­ಕಾಲಿ ­ಮಾಡಿದರು.

ನಮ್ಮ ­ಟ್ರ್ಯಾಫಿಕ್ ­ಇಲಾಖೆಯಲ್ಲಿ ­ಕೆಲವರು ­ಒಳ್ಳೆಯವರೂ ­ಇದ್ದಾರೆ. ­ರಾಜಾಚಾರಿ, ­S.I ­ಅವರನ್ನ ­D.L ತೋರಿಸಲು ­ಕೇಳಿದಾಗ ­ತಕ್ಷಣ ­ತೆಗೆದು ­ತೋರಿಸಿ '­ನಾವು ­ಫರ್ಸ್ಟ್ ­ಸರಿ ­ಇರಬೇಕಲ್ಲವೇ ­ಸರ್, ­ಬೇರೆಯವರನ್ನ ­check ­ಮಾಡೋ ­ಮೊದಲು ­ನಾವು ­ರೂಲ್ಸ್ ­ಅಂಡ್ ­ರೆಗ್ಯುಲೇಶನ್ಸ್ ­ಫಾಲೊ ­ಮಾಡ್ಬೇಕು, ­ನಾವೇ D.L ­ಇಲ್ಲದೆ ­ಬೇರೆಯವರನ್ನ ­ತೋರಿಸಲು ­ಕೇಳೋದು ­ಯಾವ ­ಮಟ್ಟಿಗೆ ­ಸರಿ ­ಅಲ್ವಾ' ­ಎಂದು ­ಹೇಳಿದರು. ­­­ಏಗೋ ­ಸದ್ಯ ಕೆಲವರಾದರೋ ­ರೂಲ್ಸ್ ­ಅಂಡ್ ­ರೆಗ್ಯುಲೇಶನ್ಸ್ ­ಫಾಲೊ ಮಾಡುವವರಿದ್ದಾರಲ್ಲ.
.
ಇದು ­ಟ್ರ್ಯಾಫಿಕ್ ­ಪೋಲೀಸ್ ­ಕಥೆಯಾದರೆ, ­ಸರ್ಕಾರಿ ­ವಾಹನ ­ಚಲಿಸುವವರು ­ಹೇಗೆ? ­ಅದನ್ನೂ ­F.I.R ­ನವರು ­ತೋರಿಸಿದರು. ­ ತೊಟಾಗಾರಿಕೆ ­ಇಲಾಖೆ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೇ, ­ಆಫೀಸ್ ­ನಲ್ಲಿ ­ಇದೆ ­ಸರ್ ­ಎಂದು ­ಉತ್ತರಿಸಿದನು. ಪೋಲೀಸ್ ­ಇಲಾಖೆ ­ವಾಹನ ­ಚಾಲಕನನ್ನು ­D.L ­ಕೇಳಿದರೆ '­ಇದೆ ­ಸರ್, ­ಇದೆ' ­ಎಂದು ­ಹೇಳುತ್ತಲ್ಲೇ ­ಗಾಡಿ ­ನಿಲ್ಲಿಸದೇ ­ಹೊರಟೆ ­ಹೋದನು. ­ನಮ್ಮ ­ಹೈ ­ಕೋರ್ಟ್ ­ಜಡ್ಜ್ ­ರವರ ­ವಾಹನ ­ಚಾಲಕನು ­ಕೂಡ ­D.L ­ಇಲ್ಲದೆ ­ವಾಹನ ­ಚಲಿಸುತ್ತಿದ್ದನು. ­ಪ್ರಶ್ನಿಸಿದ್ದಕ್ಕೆ '­I.D ­ಕಾರ್ಡ್ ­ಇದ್ರೆ ­ಸಾಕು ­ಸಾರ್, ­D.L ­ಏನು ­ಬೇಕಿಲ್ಲ' ­ಎಂದು ­ಹೇಳಿದನು. ­­ACP ­ಮನೋಹರ್ ­ಅವರ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೆ ­ಯಾವುದೋ ­ಹಸಿರು ­ಬಣ್ಣದ ­ಚಿಕ್ಕ ­ಡೈ ­ರಿ ­ತೋರಿಸಿ ­ಇದೆ ­D.L ­ಎಂದು ­ಹೇಳಿದನು. ­ಸರಿಯಾಗಿ ­ತೋರಿಸಿ ­ಅಂದರೆ '­ಇದೆ ­ಸರ್' ­ಎಂದು ­ಮಾತ್ರ ­ಹೇಳುತ್ತಿದ್ದನು, ­ಆದರೆ ­ತೆಗೆದು ­ತೋರಿಸಲಿಲ್ಲ. ­ಅಷ್ಟರಲ್ಲಿ ­ಪಕ್ಕದಲ್ಲಿದ್ದ ­ACP ­ಮನೋಹರ್ ­F.I.R ­ತಂಡದವರನ್ನು ­ಕರೆದು '­D.L ­ಕೇಳುವುದ್ದಕ್ಕೆ ­ಅಂತಾನೆ ­ಕೆಲವರನ್ನು ­ಸರ್ಕಾರ ­ನೇಮಿಸಿದೆ. ­ಯಾರು ­ಬೇಕೋ ­ಅವರು ­ಕೇಳುವುದು ­ಸರಿಯಲ್ಲ. ­ನಿಮಗೆ ­ಕೇಳುವ ­ಅಧಿಕಾರವಿಲ್ಲ' ­ಎಂದು ­ಹೇಳಿದರು. ­ಇಂತ ­ಅಧಿಕಾರಿಗಳಿಗೆ ­ಏನೆಂದು ­ಹೇಳಬೇಕು. ­ಪ್ರೆಸ್, ­ಜರ್ನಲಿಸ್ಟ್ಸ್ ­ಅಷ್ಟೇ ­ಅಲ್ಲ ­ಸಾಮಾನ್ಯ ­ಜನರಿಗೂ ­ಕೇಳುವ ­ಅಧಿಕಾರವಿದೆ ­ಅನ್ನುವುದು ­ಅವರಿಗೆ ­ಯಾರು ­ಹೇಳಬೇಕು. ಇವರದು ­ಈಗೆ ­ಆದರೆ, ಮತ್ತೊಬ್ಬ ­ಪೋಲೀಸ್ ­ಇಲಾಖೆ ­ವಾಹನ ­ಚಾಲಕನನ್ನು ­D.L ­ತೋರಿಸಲು ­ಕೇಳಿದರೆ ­ತಕ್ಷಣ ­ತೋರಿಸಿ '­­ನನ್ನ ­ಅಧಿಕಾರಿಯವರು ­strict ­ಆಗಿ ­ಹೇಳಿದ್ದಾರೆ ­ಸರ್, ­D.L ­ಮತ್ತು ­ಎಲ್ಲ ­ಡಾಕ್ಯುಮೆಂಟ್ಸ್ ­ಯಾವಾಗಲು ­ಇಟ್ಟುಕೊಂಡಿರಬೇಕು ­ಎಂದು' ­ಅಂತ ­ಹೇಳಿದನು. ­ನಮ್ಮ ­ACP ­ಮನೋಹರ್ ­ಇದನ್ನು ­ಕಲಿಯಬೇಕು.

F.I.R ­ತಂಡದವರು ­ಈ ­ಸಂಚಿಕೆಯನ್ನು, ­ಈ ­ವಿಷಯವನ್ನು ­ಜನರ ­ಮುಂದೆ ­ತಂದಿರುವುದಕ್ಕೆ ­ಅವರಿಗೆ ­ನನ್ನ ­ವಂದನೆಗಳು. ­ಇನ್ನೂ ­ಮುಂದೆ ­ಟ್ರ್ಯಾಫಿಕ್ ­ಪೋಲೀಸ್ ­ಯಾರನ್ನಾದರೋ ­D.L ­ತೋರಿಸಲು ­ಕೇಳಿದರೆ ­ಮೊದಲು ­ನಿಮ್ಮ ­D.L ­ತೋರಿಸಿ ­ಎನ್ನುತ್ತಾರೇನೋ. ­ಈ ­ಸಂಚಿಕೆಯಲ್ಲಿ ­ತೋರಿಸಿರುವ ­ಟ್ರ್ಯಾಫಿಕ್ ­ಪೋಲೀಸ್ ­ಗಳು, ­ಇದನ್ನು ­ನೋಡಿರುವರು ­ಇನ್ನೂ ­ಮುಂದೆ ­ವಾಹನ ­ಚಲಿಸುವಾಗ ­ತಪ್ಪದೇ ­ಎಲ್ಲಾ ­ಡಾಕ್ಯುಮೆಂಟ್ಸ್ ­ಗಳನ್ನು ­ತಮ್ಮೊಡನೆ ­ಇಟ್ಟುಕೊಂಡಿರುತ್ತಾರೆ ­ಎಂದು ­ಬಾವಿಸುತ್ತೇನೆ. ­F.I.R ­ತಂಡದವರು ­ಈ ­ವಿಷಯದ ­ಬೆಗ್ಗೆ ­ಒಂದು ­ಎಪಿಸೋಡ್ ­ನಮ್ಮ ­ಮುಂದೆ ­ತಂದಿರುವುದನ್ನು ­ಪ್ರಶಂಸಿಸುತ್ತೇನೆ.

Tuesday, February 5, 2008

My Inspiration

Always... n... Always... follow your dreams.
Please don't ever let anything set you back...or...lose hope... don't ever lose sight of your dreams.
Sometimes bad things do happen - no one knows why - but they are designed to make you stronger...
So... we have got to learn to always be strong and move on.
So... Always Think BIG...