Tuesday, November 29, 2011

ಲಗೋರಿ

ಟೀಮ್ ಔಟಿಂಗ್ ಎಂದು ಕ್ಲಬ್ ಕಬಾನ ಹೋಗಿದ್ದೆವು. ಅಲ್ಲಿ ಕೆಲವು ಬೇರೆ ಕಂಪನಿ ಅವರು ಕೂಡ ಬಂದಿದ್ದ ಕಾರಣ ಬ್ಯಾಡ್‌ಮಿಂಟನ್ ಕೋರ್ಟ್, ವಾಲೀಬಾಲ್ ಕೋರ್ಟ್ ಎಲ್ಲದರಲ್ಲೂ ಜನರು ಇದ್ದರು. ಏನು ಮಾಡೋದು ಎಂದಾಗ ನಮ್ಮ ಮ್ಯಾನೇಜರ್ ಲಗೋರಿ ಆಟ ಆಡೋಣ ಎಂದು ಹೇಳಿದರು. ಎಲ್ಲರು ಒಪ್ಪಿದರು. ಅವರಿಗೆ ನನ್ನ ಧನ್ಯವಾದಗಳು. ಬಹಳ ವರ್ಷಗಳ ನಂತರ ಲಗೋರಿ ಆಟ ಆಡುವ ಅವಕಾಶ ಸಿಕ್ಕಿತು.

ಸುತ್ತ ಮುತ್ತಲೆಲ್ಲ ಹುಡುಕಿ ಲಗೋರಿ ಆಟಕ್ಕೆ ಬೇಕಾದ 7 ಕಲ್ಲುಗಳನ್ನು ಹೊಂದಿಸಿದೆವು. ಎರಡು ತಂಡಗಳನ್ನು ಮಾಡಿ ಆಟ ಪ್ರಾರಂಭಿಸಿದೆವು. ಚಂಡನ್ನು ಹೊಡೆದು ಕಲ್ಲು ಬೀಳಿಸಲು ಅರೆ ಸಾಹಸ ಮಾಡಬೆಕಾಹಿತು. ಹೇಗೋ ಕಡೆಗೆ ಕಲ್ಲುಗಳ್ಳನ್ನು ಬೀಳಿಸಿದೆವು. ಎದುರಾಳಿಗಳ ಚಂಡಿನ ಎಸೆತದಿಂದ ಬೀಳುವ ಏಟನ್ನು ತಪ್ಪಿಸಿಕೊಂಡು ಕಲ್ಲುಗಳ್ಳನ್ನು ಮತ್ತೆ ಜೋಡಿಸುವುದು ಮಾತೊಂದು ಕಷ್ಟದ ಕೆಲಸ. ಒಮ್ಮೆ ಕಲ್ಲು ಬೀಳಿಸಿ ಜೋಡಿಸುವ ಸರದಿಯಾದರೆ, ಮತ್ತೊಮ್ಮೆ ಎದುರಾಳಿಗಳ ಮೇಲೆ ಚಂಡು ಒಡೆಯುವ ಸರದಿ. ಲಗೋರಿ ಆಟದಲ್ಲಿ ಸಮಯ ಕಳೆದದ್ದೆ ತಿಳಿಯಲಿಲ್ಲ. ಮತ್ತೆ ನನ್ನ ಬಾಲ್ಯಕ್ಕೆ ಹಿಂತಿರುಗಿದಂತಿತ್ತು. ಬಾಲ್ಯದ ಆಟ ಯಾವಾಗಲು ಚಂದ, ಆ ದಿನಗಳು ಮತ್ತೆ ಬರುವುದಿಲ್ಲ. ಆದರೆ ಈ ರೀತಿ ಕೆಲವೊಮ್ಮೆ ನಮ್ಮ ಮುಂದೆ ಮತ್ತೆ ಮರಳಿದಾಗ, ಮನಸ್ಸಿಗೆ ಏನೋ ಒಂದು ಉಲ್ಲಾಸ, ಸಂತಸ.

ನಾವು ಎಷ್ಟೇ ದೊಡ್ಡವರಾದರು ನಮ್ಮ ಮನಸ್ಸು ಇನ್ನೂ ಬಾಲ್ಯದ ಜೀವನವನ್ನೇ ಇಚ್ಛಿಸುತ್ತದೆ. ಮಕ್ಕಳಂತೆ ಆಡಿ ನಲಿವ ಅವಕಾಶ ಯಾವಾಗಲು ಸಿಗುವುದಿಲ್ಲ, ಈ ರೀತಿ ಸಿಕ್ಕಾಗ ಎಷ್ಟು ಸಂತೋಷ ದೊರೆಯುವುದೋ ಅದು ಹೇಳಲಾಗುವುದಿಲ್ಲ. ಇಂತಾ ಅವಕಾಶ ನನ್ನ ಪಾಲಿಗೆ ತಂದು ಕೊಟ್ಟ ಆ ದೇವರಿಗೆ ನನ್ನ ಧನ್ಯವಾದಗಳು. ಬಾಲ್ಯದ ಸವಿ ಸವೆಯುವ ಅವಕಾಶ ಮತ್ತೆ ಮತ್ತೆ ನಮ್ಮ ಜೀವನದಲ್ಲಿ ಬರುತಿರುಲಿ ಎಂದು ಹಾರೈಸುತ್ತೇನೆ.

Tuesday, May 17, 2011

ಹೆಣ್ಣು

ಹಿಂದಿನ ಕಾಲದಲ್ಲಿ ಹೆಣ್ಣು ಮನೆಗೆ ಭೂಷಣ, ಅವಳು ಮನೆಕೆಲಸ ಮಾಡಿಕೊಂಡಿರಬೇಕು, ಮನೆಯಲ್ಲಿರಬೇಕು ಎಂದಿತ್ತು. ಓದು ಎನ್ನುವುದು ಹುಡುಗರಿಗೆ ಮಾತ್ರ, ಹುಡುಗಿಯರಿಗೆ ಅಲ್ಲ ಎಂದು ಕೂಡ ಇತ್ತು. ಕಾಲ ಬದಲಾದಂತೆ ಈ ವಿಚಾರ ಬದಲಾಯಿತು. ಇಂದು ಓದು ಎನ್ನುವುದು ಹುಡುಗ, ಹುಡುಗಿ ಇಬ್ಬರಿಗೂ. ಇಂದು ಮಯಿಳೆ ಒಳಗೂ ದುಡುಯುತ್ತಾಳೆ, ಹೊರಗೂ ದುಡುಯುತ್ತಾಳೆ. ಹೆಣ್ಣು ಮಕ್ಕಳು ಓದುವುದ್ದಕ್ಕೆ ಈಗ ಹೆಚ್ಚಿನ ಅಡಚಣೆ ಇಲ್ಲ, ಹೊರಗೆ ದುಡುಯುವುದಕ್ಕು ಅಡಚಣೆ ಇಲ್ಲ, ಆದರೆ ಇಷ್ಟು ಬದಲಾವಣೆ ಸಾಕೆ?

ಹಿಂದೆಯಾದರೋ ಮನೆಯಲ್ಲಿ ಮಾತ್ರ ದುಡಿಮೆ, ಈಗ ಮನೆಯಲ್ಲೂ ದುಡಿಯಬೇಕು, ಹೊರಗು ದುಡಿಯಬೇಕು ಏಕೆಂದರೆ ಈಗಿನ ಕಾಲದಲ್ಲಿ ಇಬ್ಬರು ದುಡಿದರೆ ಮಾತ್ರ ಸಂಸಾರ ನಡೆಸಲು ಸಾಧ್ಯ. ಹೆಣ್ಣು ಮಗಳನ್ನು ಓದಿಸಿದರೆ ಸಾಕೆ, ಅವಳು ದುಡಿಯುವಂತೆ ಆದರೆ ಸಾಕೆ... ಅವಳನ್ನು ಮನುಷ್ಯಳನ್ತೆ ಕಾಣುವುದು ಬೇಡವೇ, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಬೇಡವೇ. ಕಾಲ ಬದಲಾದಂತೆ ಎಲ್ಲವೂ ಬದಲಾಗುವುದಂತೆ, ಆದರೆ ಇಂದಿಗೂ ಬಹಳಷ್ಟು ಹೆಣ್ಣು ಮಕ್ಕಳು ಶೋಷಣೆಗೆ ಹೊಳಗಾಗುವುದು ತಪ್ಪಿಲ್ಲ. ಏಕೆ ಅನ್ನೋದು ಉತ್ತರಿಸಲಾಗದ ಪ್ರಶ್ನೆ...

ಅದೆಷ್ಟು ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಮೋಸಹೋದರೋ, ಆ ನೋವು ತಡೆಯಲಾರದೇ ಆತ್ಮಹತ್ಯೆಗೆ ಶರಣಾದವರ ಸಂಖ್ಯೆಯು ಕಡಿಮೆಯೆನಿಲ್ಲ. ಪ್ರೀತಿಸೋದಿಲ್ಲ ಅಂತ ಆಸಿಡ್ ಹಾಕಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ವರದಕ್ಷಿಣೆ ತರಲಾಗಲಿಲ್ಲ ಎಂದು ಕೊಲೆಯಾದವರು ಬಹಳಷ್ಟು, ಕುಡುಕು ಗಂಡನಿಂದ ಕೆಟ್ಟ ಬೈಗುಳ, ಏಟು ತಿಂದಾವರು, ತಿನ್ನೂತಿರುವವರಿಗೆ ಲೆಕ್ಕವೇ ಇಲ್ಲ. ಇಂದು ಕೂಡ ಗಂಡು ಮಗುವಿಗೆ ಜನನ ಕೊಡಬೇಕು, ಹೆಣ್ಣು ಮಗು ಹುಟ್ಟಿದರೆ ಅದು ಶಾಪ, ದರಿದ್ರ, ಬೇಡವಾದ ಭಾರ ಎಂದು ಭಾವಿಸುವವರು ಈ ಲೋಕದಲ್ಲಿ ಇಂದಿಗೂ ಇದ್ದಾರೆ. ಹೆಣ್ಣು ಮಗು ಹುಟ್ಟಿದರೆ ಅದು ಕೋಟಿ ಜನುಮದ ಪುಣ್ಯ, ಅದೃಷ್ಟ ಲಕ್ಷ್ಮಿ ಹುಟ್ಟಿರುವುದು ಎಂದು ಭಾವಿಸುವವರು ಬಹಳ ಕಡಿಮೆ. ಆದರೆ ಹೆಣ್ಣು ಮಗು ಹುಟ್ಟಿದರೆ ಯಾವ ಜನುಮದ ಪಾಪವೋ ಏನೋ, ದರಿದ್ರ ಲಕ್ಷ್ಮಿ ಎಂದು ಭಾವಿಸುವವರೇ ಹೆಚ್ಚು. ಗಂಡು ಹುಟ್ಟಿದರೆ ಎಲ್ಲರಿಗೂ ಸಂತೋಷ, ಅದೇ ಹೆಣ್ಣಾದರೆ ಒಬ್ಬರೆಲ್ಲ ಒಬ್ಬರು 'ಐಯೋ ಹೆಣ್ಣುಮಗೂ, ಛೇ' ಎಂದು ಹೇಳುವವರು ಆ ಮಗುವಿನ ಸುತ್ತ ಇದ್ದೇ ಇರುತ್ತಾರೆ. ಆ ಹೆತ್ತ ತಾಯಿಗೆ ಆ ಪುಟ್ಟ ಕಂದಮ್ಮನಿಗೆ ನೆಮ್ಮದಿಯಾಗಿರಲು ಬಿಡದಂತ ಮನುಷ್ಯ ರೂಪದಲ್ಲಿರುವ ಕ್ರೂರ ಮೃಗಗಳು ಈ ಪ್ರಪಂಚದಲ್ಲಿ ಬಹಳಷ್ಟು ಮಂದಿ ಇದ್ದರೆ.

ಎಷ್ಟು ಓದಿದರೇನು, ಎಂತ ಮೇಲೂ ಕೆಲಸದಲ್ಲಿದ್ದರೇನು, ಹೆಣ್ಣಿಗೆ ನೋವುಂಟು ಮಾಡುವವರು ಇದ್ದೇ ಇದ್ದಾರೆ. ಹೆಣ್ಣಿನ ಮೇಲೆ ಶೋಷಣೆ ಮಾಡುವವರು ಬದುಕಲು ಯೋಗ್ಯರಲ್ಲ. ಹೆಣ್ಣು ಗಂಡು ಎಂದು ಭೇದ ಮಾಡುವವರು ಮನುಷ್ಯರೇ ಅಲ್ಲ. ಗಂಡಾಗಲಿ, ಹೆಣ್ಣಾಗಲಿ ಅದರಲ್ಲಿ ಯಾವ ತಾರತಮ್ಯವೂ ಇಲ್ಲ ಎಂದು ಭಾವಿಸುವವರು ಬಹಳ ಕಡಿಮೆ. ಎಲ್ಲರೂ ಕಾಲ ಬದಲಾಗಿದೆ ಎನ್ನುತ್ತಾರೆ, ಆದರೆ ಹೆಣ್ಣಿಗೆ ಮಾತ್ರ ಎಷ್ಟೇ ಕಾಲ ಬದಲಾದರೂ, ಅವಳನ್ನು ಸಮಾಜ ನೋಡುವ ಪರಿ ಬದಲಾಗಿಲ್ಲ, ಅವಳ ನೋವುಗಳಿಗೆ ಕೊನೆ ಬಂದಿಲ್ಲ.

ಈ ಪ್ರಪಂಚ ಕೊನೆಯದಾಗಲೆ ಹೆಣ್ಣಿನ ನೋವಿಗೆ ಕೊನೆಯಂದು ಕಣ್ಣುತ್ತದೆ.......

Tuesday, February 9, 2010

Lost And Found

In our everyday life, we knowingly or unknowingly lose a lot of things. If lucky, we may get the lost thing but it happens very rarely. Today, for most of us mobile has become a part of life, wherever we go, it needs to be with us and if I’m not wrong, most of them also tend to lose it.

The first mobile I bought, after 3 years(quite long for one mobile), I lost it and never got back. Later started using one more mobile(gifted by my brother). Recently while travelling in auto to my office, I left my mobile in auto only. I called on my mobile number, but no one was picking, finally it came switched off. Whenever I travel in auto, I have a habit of seeing the driver’s detail that is put in a panel format at the back of driver’s seat. Luckily I remembered his driving license number. I was quite attached to this mobile, and somehow I wanted it back, so with this little information, I made up my mind to go to police station and give it a try.

I went to nearby police station, there I was asked to go to Shivajinagar police station (where I can get the driver’s details based on his license number). So I rushed to Shivajinagar police station, I gave the driver’s license number and within 5 minutes, driver’s name, address was got, the Police who gave the details was kind enough and he scanned and gave its print out to me. He advised me to go and launch a complaint in CubbonPark police station and if I have my mobile EMI number, then that would be helpful in tracking the mobile. Thanking them, I moved to CubbonPark police station. My complaint was taken, but was told that even if they get the driver, he might always say that he doesn’t know anything about it. So the best option is to give my mobile’s EMI number. Luckily I had my mobile’s EMI number which I gave it to them and left from there.

After a week, I got a call saying it has been tracked and to come to police station. I was very happy and went thinking I’ll get back my mobile. When I went there, two ladies(mother and daughter) were there. Police told that my mobile was being used by a number and when tracked, they found that it was in that girl’s name. But the girl kept saying that the number does not belong to her and she has no idea about it. The number that was tracked had her address, but she didn’t have any idea about that number. Police tried to make a call to that number, but it came switched off. The lady police over there took up the case and told that she will find out by getting the call list of that particular number and track the actual person. She gave her contact number to me and told I can call her and enquire about the status.

After a week, I called the lady police, she told that the call list had come, but the numbers in it are also coming switched off. I requested her to give me the numbers in the call list and told I will try from my end to find out. She gave me two numbers and I started making calls to them. One of them came switched off. The other number got connected, I told the person that I’m calling from Airtel, we are doing a survey and picking up some numbers randomly and calling them, I requested him to cooperate with me and answer some of my questions. He believed me and started answering my questions, I asked him whether it was a prepaid or postpaid connection, how is he finding the airtel network, what is his name and what is his mailing address. He gave up all the information. Finally I thanked him and told if any problem, then please do call 121 for help and kept the phone :-)

Immediately I called back to police and gave her the address, she was quite impressed and wanted to know how I managed to get it. I told her what happened and after hearing she told you are doing police’s work, I just said I’m just doing to get back my mobile. Every 2-3 days once, I kept calling that lady police and enquiring about the status. Finally after two weeks, I got a call from her saying they found the mobile and I can go and collect it. That evening, I went to police station, met the lady police and she handed over the mobile to me. The mobile was with the auto driver only and the SIM he used, he had given a wrong address which had landed that poor mother and daughter in police station.

Well, I just can’t say how I felt holding my mobile back in my hand, I felt as though I have achieved something impossible, it was a different experience. I had never been to police station nor made false calls to anyone, but here I had done all this. One thing I want to add here, normally the opinion we have about police is bad, but with this experience, my opinion changed. Atleast whichever police I came across during this phase were all kind enough and were very helpful. People say without giving bribe nothing happens in police station, but believe me, I didn’t give a rupee to anyone for this and neither did anyone ask for it. This was indeed a very good experience for me.

Monday, July 6, 2009

ಏನು ಬರೆಯಲಿ ಏನು ಬರೆಯಲಿ????

ತುಂಬಾ ದಿನಗಳಿಂದ ನನ್ನ ಸ್ನೇಹಿತರು ಯಾಕೆ ಬ್ಲೋಗ್ ನಲ್ಲಿ ಏನು ಹೊಸದಾಗಿ ಬರೆದಿಲ್ಲ, ಯಾಕೆ ಬ್ಲೋಗ್ update ಮಾಡೋದು ನಿಲ್ಲಿಸಿಬಿಟ್ಟಿರುವೆ ಎಂದು ಕೇಳ್ತಾನೇ ಇದ್ದಾರೆ. ಇನ್ನೂ ಕೆಲವರು ಮದುವೆ ಆದ ನಂತರ ಬ್ಲೋಗ್ ಮೇಲೆ interest ಹೋಗಿದೆಯೇ ಎಂದು ಕೇಳಿದ್ರೆ ಇನ್ನೂ ಕೆಲವರು ಮದುವೆ ಆದ ಮೇಲೆ full busy ಹಾಗಿಬಿಟ್ಟಿರುವೆಯ, ಬ್ಲೋಗ್ ನಲ್ಲಿ ತುಂಬಾ ದಿನಗಳಿಂದ ಏನು ಬರೆದೆ ಇಲ್ಲ ಅಂತ ಕೇಳ್ತಾರೆ.

ನಿಜ, ಬ್ಲೋಗ್ ನ update ಮಾಡಿ ತುಂಬಾ ತಿಂಗಳೇ ಆಗಿದೆ. ಆಗೆಯೆ ಮದುವೆ ಆದ ಮೇಲೆ busy ಅನ್ನೋ ಮಾತಿನಲ್ಲಿ ಪೂರ್ತಿ ಸತ್ಯ ಇಲ್ಲದಿದ್ರೂ ಅದು ಒಂದು ಕಾರಣ ಇದ್ರು ಇರಬಹುದು. ಬೇರೆ ಕಾರಣ ಏನಿರಬಹುದೆಂದರೆ ಯಾವ ವಿಷಯದ ಬಗ್ಗೆ ಬರೆಯೋದು ಅಂತ ತಿಳಿಯದೇ ಇರೋದು. ರಾಜಕೀಯ ನನಗೆ ಅರ್ಥ ಆಗದೆ ಇರೋ ವಿಚಾರ, ಚಿತ್ರಗಳ ವಿಮರ್ಶೆ ಬರೆಯೋದಕ್ಕೆ ಅಂತ ಒಳ್ಳೇ ಚಿತ್ರಗಳು ನಮ್ಮಲ್ಲಿ ಸದ್ಯಕ್ಕೆ ಬಂದಿಲ್ಲ. ಇನ್ನ ನನ್ನದೇ ಯಾವುದಾದರೋ experience ಬಗ್ಗೆ ಬರೆಯೋಣ ಅಂದ್ರೆ ಸದ್ಯಕ್ಕೆ ಯಾವುದು ನೆನಪಾಗುತ್ತಿಲ್ಲ ಆಗೆಯೇ ಯಾವ ವಿಷಯದ ಬಗ್ಗೆ ವಿಮರ್ಶೆ ಮಾಡೋಣ ಎಂದು ಕೂಡ ಗೊತ್ತಾಗುತ್ತಿಲ್ಲ. ಹೋಗಲಿ ಹೀಗ ತಾನೆ ಮದುವೆ ಆಗಿ ಹೊಸ ಜೀವನ ಶುರು ಮಾಡಿರುವುದರ ಬಗ್ಗೆ ಬರೆಯೋಣ ಅಂದ್ರೆ ನಿಜಕ್ಕೂ ಏನು ಬರೆಯೋದು ಅಂತ ಅಷ್ಟು ತಿಳಿಯುತ್ತಿಲ್ಲ...

ಜೀವನ ಚೆನ್ನಾಗಿದೆ, ಮೊದಲು ನಾನೊಬ್ಬಳೇ, ಹೀಗ ನನ್ನ ಸುಖ ದು:ಖ್ಖ ಅಂಚಿಕೊಳ್ಳಲು ಒಬ್ಬ ಸಂಗಾತಿ ನನ್ನ ಜೊತೆ ಇದ್ದಾರೆ. ನನಗೆ ಏನೇ ಬೇಕೆಂದರು ಅಥವಾ ಏನೇ ಹೇಳಬೇಕೆಂದರು ಇವರ ಬಳಿ ಹೇಳಬಹುದು. ಮದುವೆಯ ಮೂಲಕ ನನಗೆ ಒಳ್ಳೆಯ ಸ್ನೇಹಿತ, ಒಳ್ಳೆಯ ಬಾಳಸಂಗಾತಿ ದೊರಕಿದ್ದಾರೆ. ಮೊದಲು ಅಂತ ಜವಭ್ದಾರಿ ಅಂತ ಏನು ಇರಲಿಲ್ಲ, ಹೀಗ ಒಂದೊಂದಾಗಿ ಹೊಸ ಜವಭ್ದಾರಿಗಳು ಶುರು ಆಗಿದೆ. ಒಂದಂತೂ ನಿಜ, ಮದುವೆಗಿಂತ ಮುಂಚೆ ಜೀವನ ಒಂದು ರೀತಿ ಚೆನ್ನಾಗಿದ್ದರೆ ಮದುವೆ ಆದ ಮೇಲೆ ಮತಷ್ಟು ಚೆನ್ನಾಗಿದೆ. ಹೊಸ ಜೀವನ ಶುರುವಾಗಿದೆ, ಬಹಳ ಸೊಗಸಾಗಿದೆ. ಮದುವೆ ಜೀವನ ಏಗೆ ಅನ್ನೋದು ಮದುವೆ ಆದ ಮೇಲೆ ಮಾತ್ರ ತಿಳಿಯೋದು, ಅದು ನಾನು ಹೇಳುವುದರಿಂದ ಅಥವಾ ಬೇರೆಯವರು ಹೇಳುವುದರಿಂದ ಪ್ರಯೋಜನವಿಲ್ಲ. ಸರಿ ಅದು ಬಿಡಿ, ಒಂದಂತೂ ನಿಜ, ನೀವು ಮದುವೆ ಆದ ಮೇಲೆ ನಿಮ್ಮ ಇಂದೆ ಮುಂದೆ ಸುತ್ತವ ಪ್ರಶ್ನೆ ಒಂದೆ, ಸ್ನೇಹಿತರಾಗಲಿ ಅಥವಾ ಸಂಭಂದಿಕರಾಗಲಿ ಎಲ್ಲರೂ ನಿಮ್ಮನ್ನು ಕೇಳುವ ಪ್ರಶ್ನೆ ಒಂದೇ, ಮದುವೆ ಜೀವನ ಹೇಗಿದೆ? Howz your married life?

ಇನ್ನು ನಿತ್ಯ ದಿನಚರಿಯ ಬಗ್ಗೆ ಬರೆಯಲು ಏನು ಹೊಸದು ಇಲ್ಲ, ಎಲ್ಲ ಸಾಫ್ಟ್‌ವೇರ್ ಇಂಜನಿಯರ್ ಗಳ ಜೀವನದಂತೆ - ಆಫೀಸ್ ಹೋಗೋದು, ಕೋಡ್ ಬರೆಯೋದು, CQs ಫಿಕ್ಸ್ ಮಾಡೋದು, ಮೀಟಿಂಗ್ಸ್ ಅಟೆಂಡ್ ಮಾಡೋದು, ನೆಟ್ ಬ್ರೌಸ್ ಮಾಡೋದು, ಸ್ನೇಹಿತರೊಡನೆ ಹರಟೆ ಹೊಡೆಯೋದು,ತೀರ ಬೋರ್ ಆದ್ರೆ ಗೇಮ್ಸ್ ಆಡಿಕೊಂಡು ಕುರೋದು. ಒಟ್ಟಿನಲ್ಲಿ ಅದೇ ಆಫೀಸ್, ಅದೇ ಕೆಲಸ ಇದ್ರಲ್ಲಿ ಏನು ಬದಲಾವಣೆ ಇಲ್ಲ.

ಬ್ಲೋಗ್ ನಲ್ಲಿ ಏನು ಬರೆಯೋದು ಅಂತ ತಿಳಿಯದೇ ಸರಿ ಯಾಕೆ ಬರೀತಿಲ್ಲ ಅನ್ನೋ ಕಾರಣನೆ ಬರೆಯೋಣ ಅಂತ ಈ ವಿಷಯ ಬರೆದೆ:) ನಿಜ ಹೇಳಬೇಕೆಂದರೆ ಮನಸ್ಸಿದ್ದರೆ ಯಾವ ವಿಷಯದ ಬಗ್ಗೆ ಬೇಕಾದರೂ ಬರೆಯಬಹುದು, ಬೇಕಾದಷ್ಟು ಮಾತು ಆಡಬಹುದು. ಇದ್ದೆಲ್ಲ ನಾನು ಕೊಡುತ್ತಿರುವ ಬರಿ ಮಾತಿನ ಕಾರಣಗಳು, ಮುಖ್ಯ ಕಾರಣ ನನ್ನ ಸೋಂಬೇರಿತನ, ಇದಕಿಂತ ದೊಡ್ಡ ಕಾರಣ ಬೇರೆ ಯಾವುದು ಇಲ್ಲ ಎಂದು ನನ್ನ ಅನಿಸಿಕೆ.

Tuesday, December 30, 2008

ತಾಯಿಯೇ ಮೊದಲ ಗುರು


“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು”, ಈ ಗಾದೆ ಮಾತು ಎಲ್ಲರಿಗು ಗೊತ್ತಿರುವ ವಿಷಯವೆ. ಆದರೆ ಎಷ್ಟು ಜನ ಇದನ್ನು ಒಪ್ಪುತ್ತಾರೋ ಇಲ್ಲವೊ ನನಗೆ ಗೊತ್ತಿಲ್ಲ. ನನ್ನ ವಿಷಯದಲ್ಲಂತು ಈ ಮಾತು ಬಹಳ ಸತ್ಯವಾದದ್ದು. ನನ್ನ ತಾಯಿಯಿಂದ ನಾನು ಕಲಿತ ಪಾಠ ಬಹಳಷ್ಟು. ಅದರಲ್ಲಿ ಬಹು ಮುಖ್ಯ ಪಾಠ ಕಲಿತದ್ದು ದುಡ್ಡಿನ ಮಹತ್ವ. ದುಡ್ಡು ಯಾರಿಗೆ ಬೇಡ ಹೇಳಿ. ಆಗೆ ಅದನ್ನ ಕರ್ಚು ಮಾಡೋದ್ರಲ್ಲೂ ಬಹಳ ಮಂದಿ ಇಂಜರಿಯುವುದಿಲ್ಲ. ಆ ದುಡ್ಡು ನಮ್ಮದಾಗಿರಲಿ ಇಲ್ಲವೆ ಬೇರೆಯವರದ್ಡಾಗಿರಲಿ, ಒಟ್ಟಿನಲ್ಲಿ ಕರ್ಚು ಮಾಡಬೇಕು. ದುಡ್ಡಿನ ಬೆಲೆ ತಿಳಿಯದ ಜನರಲ್ಲಿ ಬಹುಶಹ ನಾನು ಒಬ್ಬಳಾಗಿರುತ್ತಿದ್ದೆನೆನೊ, ನನ್ನ ತಾಯಿಯು ಕಳಿಸಿದ ಪಾಠದಿಂದ ಇಂದು ನನಗೆ ದುಡ್ಡಿನ ಬೆಲೆ ಏನು ಅನ್ನೊ ಅರಿವಿದೆ.

ಆಗ ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಲ್ಲಿ ಕೆಲವೊಮ್ಮೆ ಶಿಕ್ಷಕರು ಏನಾದರೋ ತಿಂಡಿ(ಸಮೋಸ, ಚಕ್ಕುಲ್ಲಿ, ಚೊಚೋ ಇತ್ಯಾದಿ) ತಂದು ಮಧ್ಯಾನದ ಸಮಯದಲ್ಲಿ ಮಾರುತ್ತಿದ್ದರು. ಬೇಕೆನ್ನುವ ಮಕ್ಕಳು ದುಡ್ಡು ಕೊಟ್ಟು ಆ ತಿಂಡಿ ತೆಗೆದುಕೊಳ್ಳಬಹುದು. ನಮ್ಮ ಮನೆಯಲ್ಲಿ ಪಾಕೆಟ್ ಮನೀ ಅನ್ನೊ ಆಚರವೆಲ್ಲ ಇರಲಿಲ್ಲ. ದುಡ್ಡು ಬೇಕೆಂದಾಗ ಯಾವುದಕ್ಕೆ ಬೇಕು ಎಂದು ಹೇಳಿದರೆ ಮಾತ್ರ ನಮ್ಮ ತಾಯಿ ಹಣ ಕೊಡುತ್ತಿದ್ದರು.

ಹೀಗೆ ಒಮ್ಮೆ ಒಬ್ಬ ಶಿಕ್ಷಕಿ ಚಕ್ಕುಲ್ಲಿ, ಚೊಚೋ ತಿಂಡಿ ತಯಾರಿಸಿ ತಂದಿದ್ದರು. ನನ್ನ ಬಳಿ ದುಡ್ಡಿ ರಲಿಲ್ಲ. ಆ ಶಿಕ್ಷಕಿ, ಇವತ್ತು ತಿಂಡಿ ತೆಗೆದುಕೊಳ್ಳಿ, ನಾಳೆ ಅದರ ದುಡ್ಡು ಕೊಡಿ ಅಂತ ಹೇಳಿದರು. ಅಷ್ಟೇ ಸಾಕಾಗಿತ್ತೇನೋ ನನಗೆ ಗೊತಿಲ್ಲ, ನನ್ನ ಸ್ನೇಹಿತರೊಡನೆ ನಾನು ಕೂಡ ಹೋದೆ, ಒಂದು ಪ್ಲೇಟ್ ಚಕ್ಕುಲ್ಲಿ, ಚೊಚೋ ತೆಗೆದುಕೊಂಡು ತಿಂದೆ. ಆ ಒಂದು ಪ್ಲೇಟ್ ತಿಂಡಿಗೆ 2 ರೂಪಾಯಿಗಳು. ಸರಿ ನಾಳೆ ಅಮ್ಮನ ಹತ್ತಿರ ಈಸ್‌ಕೊಂಡು ಬಂದು ಕೊಟ್ಟರೆ ಆಯಿತು ಎಂದುಕೊಂಡೆ. ಸಾಯಾಂಕಾಲ ಮನೆಗೆ ಹೋದಮೇಲೆ ಅಮ್ಮನಿಗೆ 2 ರೂಪಾಯಿ ಬೇಕು ಎಂದು ಕೇಳಿದೆ. ಅಮ್ಮ ಏನಕ್ಕೆ ಎಂದರು. ಅವರಿಗೆ ನಡೆದ ಸಂಗತಿ ಹೇಳಿದೆ. ಆಗ ನನ್ನ ತಾಯಿ ಯಾರನ್ನು ಕೇಳಿ ತಿಂಡಿ ತಿಂದೆ. ನಿನ್ನ ಬಳಿ ಹಣವಿಲ್ಲದ ಮೇಲೆ ಯಾಕೆ ತಿಂಡಿ ತಗೊಂಡು ತಿಂದೆ. ನಿನ್ನ ಹತ್ತಿರ ದುಡ್ದಿರಬೇಕು, ಆ ದುಡ್ಡು ನಿನ್ನ ಸ್ವಂತ ದುಡಿಮೆಯದ್ದಾಗಿರಬೇಕು, ಆಗ ನಿನಗೆ ಅದನ್ನು ಕರ್ಚು ಮಾಡುವ ಅಧಿಕಾರವಿದೆ. ಅದು ಬಿಟ್ಟು ಇಲ್ಲದ ದುಡ್ಡಲ್ಲಿ ತಿಂದು ಬಂದಿದೀಯಾ, ಸಾಲ ಮಾಡೋದು ಬಹಳ ಸುಲಭ, ಆದರೆ ಅದನ್ನ ತೀರಿಸೋದು ಬಹಳ ಕಷ್ಟ ಎಂದು ಹೇಳಿದರು. ದುಡ್ಡು ಕರ್ಚು ಮಾಡೋರಿಗೆ ಏನು ಗೊತ್ತಾಗುತ್ತದೆ, ಅದ್ದನ್ನ ಸಂಪಾಧನೆ ಮಾಡೋರಿಗೆ ತಾನೆ ಅದರ ಕಷ್ಟ ತಿಳಿಯೋದು. 2 ರೂಪಾಯಿ ಇದ್ದರೆ ಒಂದು ದಿನದ ತರಕಾರಿ ಬರುತ್ತೆ(ಆಗ ತರಕಾರಿ ಬೆಲೆ ಹೀಗಿನಷ್ಟಿರಲಿಲ್ಲವೇನೋ) ಎಂದು ಬೈದರು. ಕೊನೆಗೆ ನಾನಂತೂ 2 ರೂಪಾಯಿ ಕೊಡೋದಿಲ್ಲ, ಅದೇನು ಮಾಡ್ತೀಯೋ ಮಾಡ್ಕೋ ಎಂದು ಹೇಳಿ ಬಿಟ್ಟರು. ನನಗೆ ಏನು ಮಾಡೋದು ತಿಳಿಯಲಿಲ್ಲ. ಆ ಸಮಯದಲ್ಲಿ ನನ್ನ ತಂದೆ ಊರಿನಲ್ಲಿ ಇರಲಿಲ್ಲ. ಮಾರನೆ ದಿನ ಶಾಲೆಗೆ ಹೋದೆ, ಆ ಶಿಕ್ಷಕಿ ತರಗತಿಗೆ ಬಂದು, ನೆನ್ನೆ ತಿಂಡಿ ತೆಗೆದು ಕೊಂಡೋರು 2 ರೂಪಾಯಿ ತಂದಿದ್ದೀರಾ, ತಂದು ಕೊಡಿ ಅಂದ್ರೂ. ಎಲ್ರೂ ಕೊಟ್ರೂ, ಆದ್ರೆ ನಾನು ಮಾತ್ರ ಕೊಡ್ಲಿಲ್ಲ. ನಾಳೆ ತಂದು ಕೊಡ್ತೀನಿ ಅಂದೆ. ದಿನ ಮನೆಗೆ ಹೋಗೋದು, ಅಮ್ಮನಿಗೆ ಕೇಳೋದು. ಅಮ್ಮ ಏನೇ ಆದ್ರೂ ನಾನು ಕೊಡಲ್ಲ, ಏನಾದ್ರೋ ಮಾಡ್ಕೋ ಅಂತ ಒಂದೇ ಮಾತು. ಈ ಕಡೆ ಶಾಲೆಯಲ್ಲಿ ಎಲ್ರೂ ಕೊಟ್ಟಾಗಿತ್ತು, ನನ್ನನ್ನು ಬಿಟ್ಟು. ದಿನವು ಎಲ್ಲರ ಮುಂದೆ ನಿಲ್ಲೊದು, ಆ ಶಿಕ್ಷಕಿ ಕೇಳೋದು, ನಾನು ಇಲ್ಲ ಅನ್ನೋದು. ಹೀಗೆ ಒಂದು ವಾರ ಆಯಿತು. ಕೊನೆಗೆ ಆ ಶಿಕ್ಷಕಿ ನಾಳೆ ತರಲಿಲ್ಲ ಅಂದರೆ ಕ್ಲಾಸ್ ನಿಂದ ಹೊರಗೆ ನಿಲ್ಲಿಸ್ತೀನಿ ಅಂದ್ರು. ಅಮ್ಮನಿಗೆ ಕೇಳಿಕೊಂಡೆ, ಅಮ್ಮ ನಿನಗೆ ದುಡ್ಡಿನ ಬೆಲೆ ಗೊತ್ತಾಗಬೇಕು, ಎಷ್ಟು ಕಷ್ಟ ದುಡ್ಡು ಸಂಪಾದಿಸುವುದು ಅನ್ನೋದು ನಿನಗೆ ತಿಳಿಯಬೇಕು, ಹೊರಗೆ ನಿಲ್ಲಿಸಿದ್ರೆ ನಿಂತ್ಕೋ ಅಂತ ಹೇಳಿದ್ರು. ಮಾರನೆ ದಿನ 1 ಗಂಟೆ ಕಾಲ ನನ್ನನು ಕ್ಲಾಸ್ ನಿಂದ ಹೊರಗೆ ನಿಲ್ಲಿಸಿದ್ರು. ಹೊರಗೆ ನಿಂತು ಬಹಳ ಹತ್ತೆ. ಆ ದಿನ ಮನೆಗೆ ಬಂದೊಡನೆ, ಅಳುತಲ್ಲೇ ಅಮ್ಮನಿಗೆ ಇನ್ಯಾವತ್ತು ಈ ರೀತಿ ಮಾಡೋದಿಲ್ಲ, ಇದೆ ಕೊನೆ. ನನ್ನನ್ನು ಕ್ಷಮಿಸು, ದಯವಿಟ್ಟು ಇದೊಂದು ಸಲ ನನಗೆ 2 ರೂಪಾಯಿ ಕೊಡು, ಇನ್ನು ಮುಂದೆ ಯಾವತ್ತು ಈ ರೀತಿ ಮಾಡೋದಿಲ್ಲ, ದುಡ್ಡನ್ನು ವ್ರತ ಕರ್ಚು ಮಾಡೋದಿಲ್ಲ ಎಂದು ಕೇಳಿಕೊಂಡೆ. ಆಗ ಅಮ್ಮ ನನ್ನ ಕಣ್ಣೊರೆಸಿ, ತಗೋ 2 ರೂಪಾಯಿ ಅಂತ ಕೊಟ್ರೂ. ಅವರು ಒಂದು ಮಾತು ಕೂಡ ಹೇಳಲಿಲ್ಲ. ಬಹುಶಹ ಅವರಿಗೆ ಅನಿಸಿತೇನೋ ನನ್ನ ಮಗಳು ಇಂದು ಒಂದು ಬಹುಮುಖ್ಯ ಪಾಠ ಕಲಿತಳು ಎಂದು.

ಇಂದು ನಾನು ದುಡಿಯುತ್ತಿದ್ದೇನೆ, ದುಡ್ಡನ್ನು ಕರ್ಚು ಸಹ ಮಾಡೊತ್ತಿದ್ದೇನೆ, ಆದರೆ ಕರ್ಚು ಮಾಡುವಾಗ ಅಗತ್ಯ ಕಿಂತ ಹೆಚ್ಚಾಗಿ ಮಾಡೋದಿಲ್ಲ, ಪ್ರತಿ ಸಲವೂ ನನ್ನ ತಾಯಿ ಕಲಿಸಿದ ಆ ಚಿಕ್ಕ ಪಾಠ ನೆನಪಾಗುತ್ತದ್ದೆ. ಇಂದು ನನ್ನ ತಾಯಿ ನನ್ನನ್ನು ಏನು ಕೇಳೋದಿಲ್ಲ, ದುಡ್ಡು ಏನು ಮಾಡ್ತೀಯಾ, ಎಷ್ಟು ಕರ್ಚು ಮಾಡ್ತೀಯಾ, ಒಂದು ಪ್ರಶ್ನೆಯು ಕೇಳೋದಿಲ್ಲ, ಆದರೆ ಅವರು ಕಲಿಸಿದ ಪಾಠ ಹಿಂದಿಗೂ ನಾನು ಮರೆತಿಲ್ಲ, ನಿನ್ನ ಬಳಿ ಹಣವಿರಬೇಕು, ಆಗ ನೀನು ಕರ್ಚು ಮಾಡಬೇಕು, ಹಾಗೆ ನೀನು ಕರ್ಚು ಮಾಡಿದ್ದು ವ್ರತವಾಗಬಾರದು.

ನಿಜಕ್ಕೂ ತಾಯಿಗಿಂತ ಮಿಗಿಲಾದ ದೇವರಿಲ್ಲ, ಗುರುಗಳಿಲ್ಲ. ನನ್ನ ತಾಯಿಯೇ ನನ್ನ ಮೊದಲ ಗುರು.

Sunday, August 24, 2008

ದಾರಿ ಬಿಡ್ರಪ್ಪೋ ಗಾಡಿ ಬಂತು…

ಇಷ್ಟು ದಿನ ಗಾಡಿಯಲ್ಲಿ ಪ್ರಯಾಣಿಸುವಾಗ ನನಗೆ ಯಾವ ಭಯವು ಇರಲಿಲ್ಲ. ಆರಾಮಾಗಿ ಕೂತು ಹೋಗುತ್ತಿದ್ದೆ ಯಾಕೆಂದರೆ ಗಾಡಿ ಚಲಿಸುವವರು ಬೇರೆಯವರಾಗಿರುತ್ತಿದ್ದರು. ಆದರೆ ಅದೇ ಗಾಡಿ ನಾನು ಹೋಡಿಸಬೇಕು ಅಂದರೆ ನನಗೆ ಆಗುತ್ತಿದ್ದ ಭಯ ಅಷ್ಟಿಷ್ಟಲ್ಲ. ದಾರಿಯಲ್ಲಿ ನಡೆಯುವಾಗ ಪಕ್ಕದಲ್ಲಿ ಯಾವುದಾದರೋ ಗಾಡಿ ಸ್ಪೀಡ್ ಆಗಿ ಹೋದರೆ ಸಾಕು, ಭಯವಾಗುತ್ತಿತ್ತು. ಈ ಜನ್ಮದಲ್ಲಿ ನಾನು ಗಾಡಿ ಹೋಡಿಸೋದಿಲ್ಲ, ನನಗೆ ಅಷ್ಟು ಧೈರ್ಯ ಇಲ್ಲ ಎಂದು ಭಾವಿಸಿದ್ದೆ. ನಾನು ಅಂದುಕೊಂಡಂತೆ ಆಗುವುದಾಗಿದ್ದರೆ ಜೀವನ ನನಗೆ ಇಷ್ಟ ಬಂದಂತೆ ಬದಲಿಸಿ ಬಿಡುತ್ತಿದ್ದೆ ಏನೋ. ಆದರೆ ಇದ್ಯಾವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಹಾಗೆ ನಾನು ಕೂಡ ಗಾಡಿ ಹೋಡಿಸೋದು ಕಲಿಯಬೇಕೆನ್ನುವಂತಾಯಿತು.

ನಮ್ಮ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿ ಓಡಿಸಬೇಕಾದರೆ ನನಗಂತು ಅರೆ ಸಾಹಸವೇ ಮಾಡಬೇಕಾಗುತ್ತದ್ದೆ. ಗಾಡಿ ಕಲಿಯಲು ಶುರು ಮಾಡಿದೆ, ಟ್ರೇನರ್ ದಿನವೂ ಬರಲು ಶುರು ಮಾಡಿದರು, ಈಗೆ ಒಂದು ದಿನ ಬೆಂಗಳೂರು ಟ್ರ್ಯಾಫಿಕ್ ನಲ್ಲಿ ಗಾಡಿಯಲ್ಲಿ ಹೋಗುವಾಗ, FM ನಲ್ಲಿ 'ಜೋಗಿ' ಚಿತ್ರದ 'ಹೊಡಿಮಗ ಹೊಡಿಮಗ' ಹಾಡು ಬರುತ್ತಿತ್ತು. ಆಗ ನನ್ನ ಮನಸ್ಸು ನನ್ನ ಪರಿಸ್ತಿತಿ ಎಲ್ಲವು ಸೇರಿ ಈ ಹಾಡನ್ನು ಬೇರೆ ರೀತಿಯಲ್ಲೇ ರೂಪಿಸಿತು. ಆ ರೀಮಿಕ್ಸ್ ಹಾಡು ಹೀಗಿದೆ:

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ
ಈ ರೋಡ ಮೇಲೆ ಬಂದ ಮೇಲೆ ಸಾವೇ ಕಣೋ
ಈ ಕೈನಲ್ ಸ್ಟಿಯರಿಂಗ್ ಹಿಡಿದ ಮೇಲೆ ಭಯವೇ ಕಣೋ

ಮಗ ಸುತ್ಲು ಗಾಡಿ ಕಣ್ಲಾ, ಬರಿ ಹಾರ್ನ್ ಸೌಂಡೆ ಕಣ್ಲಾ, ಜೊತೆಗ್ ಕಿರ್ಚೊ ಟ್ರೇನರ್ ಕಣ್ಲಾ, ಗಾಡಿ ಸಾವಸ್ ವೆ ಬೇಡ ಅನ್ಸ್ತದ್ ಕಣ್ಲಾ, ತುಂಬ ಭಯ ಆಗ್ತದ್ ಕಣ್ಲಾ, ಆದ್ರು ಮುಂದೆ ಹೋಗ್ಲೆ ಬೇಕು ಕಣ್ಲಾ, ಲೇ...

ಕ್ಲಚ್ಚು ಬ್ರೇಕೂ ಗೇರು ಅಂತ ಏನೇನ್ ಐತ್ಕಣ್ಲಾ
ಅಕ್ಸೆಲ್ರೇಟರ್ ಆಮ್ಕ್ ದ್ರೆ ಸಾಕು ಮುಂದಕ್ ಓಡ್ತಾದ್ ಕಣ್ಲಾ
ಯಾವಗ್ ಕ್ಲಚ್ ಅಮ್ಕೊದು, ಯಾವಗ್ ಬ್ರೇಕ್ ಹಾಕೋದು
ಯಾವಗ್ ಗೇರಾನ್ನ ಚೇಂಜ್ ಮಾಡೋದು...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ

ಮಗ ಸಕತ್ ಟ್ರ್ಯಾಫಿಕ್ ಕಣ್ಲಾ, ಪ್ರತಿ ರೋಡ್ಗು ಸಿಗ್ನಲ್ ಕಣ್ಲಾ, ರೆಡ್ ನಿಂದ್ ಗ್ರೀನ್ ಸಿಗ್ನಲ್ ಐತು ಕಣ್ಲಾ , ಸಿಗ್ನಲ್ ನಾಗ್ ಗಾಡಿ ನಿನ್ತ್ ಬಿಡ್ತು ಕಣ್ಲಾ, ಎಲ್ರೂ ಬರಿ ರೇಗೋದೆ ಐತು ಕಣ್ಲಾ, ಯಾಕೊ ಟೈಮೆ ಸರಿ ಇಲ್ಲ್ ಕಣ್ಲಾ, ಲೇ...

ಲೋ ಬೀಮ್ ಹೈ ಬೀಮ್ ಅಂತ ಏನೇನ್ ಬೀಮ್ಗಲೈತ್ ಕಣ್ಲಾ
ಲೆಫ್ಟು ರೈಟು ಇಂಡಿಕೇಟರ್ ಮರೀಬೇಡ್ದಂತ್ಕಣ್ಲಾ
ಸೈಡ್ ಮಿರರ್ನೇ ನೋಡ್ಲ, ರಿಯರ್ ವ್ಯೂ ಮಿರರ್ನೇ ನೋಡ್ಲ
ಇಲ್ಲ ಮುಂದೆ ನೋಡ್ಕೊಂಡು ಹೋಡಿಸ್ಲಾ...

ನಡಿ ಮಗ, ನುಗ್ಗು ಮಗ, ತೂರ್ಸು ಮಗ, ಏನೇ ಅಗ್ಲಿ ನಿಲ್ಲಿಸ್ ಬೇಡ ಕಾರ್ ನ
ಹಕ್ಕ ಪಕ್ಕ ಯಾರೆ ಬರ್ಲಿ ಇಂದೆ ಮುಂದೆ ಯಾರೆ ಇರ್ಲಿ ನಿಲ್ಲಿಸ್ ಬೇಡ ಕಾರ್ ನ

Sunday, June 22, 2008

ನನ್ನ ಪುಟ್ಟ angel

ಮಕ್ಕಳು ದೇವರ ರೂಪ. ಆಗೇ ಏಕೆ ಹೇಳುತ್ತಾರೋ ನನಗೆ ಸರಿಯಾಗಿ ತಿಳಿಯದು, ನನಗೆ ತಿಳಿದ ಮಟ್ಟಿಗೆ ಮಕ್ಕಳು ಕಲ್ಮಷವಿಲ್ಲದವರು, ಮೋಸ, ಅಸೂಯೆ ಇಂತ ಯಾವುದೆ ಕೆಟ್ಟತನ ಇಲ್ಲದವರು. ಮುಗ್ಧ ಮನಸ್ಸಿನವರು. ಎಷ್ಟೇ ನೋವಿರಲಿ, ಈ ಮಕ್ಕಳೊಂದಿಗೆ ಕೆಲವು ಕ್ಷಣ ಕಳೆದರೆ ಸಾಕು, ಎಲ್ಲ ನೋವು ಹೋಗಿ ಮನಸ್ಸಿಗೆ ಸಂತೋಷಸಿಗುತ್ತದೆ.
ನನ್ನ ಪುಟ್ಟ ಜಯಂತನು(ನನ್ನ cousin ಮಗ) ಎಲ್ಲ ಮಕ್ಕಳಂತೆ ಮುಗ್ಧ ಮನಸ್ಸುಳ್ಳ ಮಗು. ಇದು ಸ್ವಲ್ಪ ದಿನಗಳ ಹಿಂದೆ ನಡೆದದ್ದು. ಮನಸ್ಸಿಗೆ ಬಹಳ ಬೇಸರವಾಗಿತ್ತು. ಏನು ಮಾಡಲು ಮನಸ್ಸಿಲ್ಲ. ಸರಿ ಜಯಂತನನ್ನು ನೋಡಿ ಬಹಳ ದಿನಗಳಾಗಿದೆ ಹೋಗಿ ನೋಡಿ ಬರೋಣ ಎಂದು ಹೊರಟೆ. ಆಗ ನನಗೆ ಬಂದ ಯೋಚನೆ, ಬಹಳ ತಿಂಗಳಾಗಿದೆ, ಆ ಪುಟ್ಟ ಮಗುವಿಗೆ(ಅವನಿಗೆ 2 ವರ್ಷ ಇರಬೇಕು) ನನ್ನ ನೆನಪಿರುತ್ತದೆಯೆ ಎಂದು. ಅವರ ಮನೆ ಬಾಗಿಲಿಗೆ ಹೋಗುತ್ತಲ್ಲೇ ಪುಟ್ಟ ಹೆಜ್ಜೆ ಇಡುತ್ತ ಹೊರಗೆ ಓಡಿ ಬಂದ. ನನ್ನನ್ನು ನೋಡುತ್ತಲೆ ನಕ್ಕ. ನನ್ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದ. ಅಡಿಗೆ ಮನೆಗೆ ಓಡಿ ಹೋಗಿ, ಅವನ ತಾಯಿಗೆ ಬಾ ಎಂದು ಹೊರಗೆ ಕರೆದುಕೊಂಡು ಬಂದ. ಆಗ ಅವನ ಅಮ್ಮ ಯಾರೋ ಇವರು ನಿನಗೆ ಗೊತ್ತಾ ಎಂದಳು. ಅವನು ನನ್ನ ಬಳಿ ಬಂದು ನಗುತ್ತ ತೊದಲ್ಮಾತಿನಲ್ಲಿ ವಿಜಿ ಎಂದ. ಅದನ್ನು ಕೇಳಿ ಎಂತ ಹುಚ್ಚಿ ನಾನು, ನೆನಪಿರುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತಿದ್ದೆನಲ್ಲ ಎಂದು ಮನಸ್ಸಿನಲ್ಲಿ ನನಗೆ ನಾನೇ ಬೈದುಕೊಂಡೆ. ಅವನು ತನ್ನ ಆಟದ ಸಾಮಾನುಗಳ್ಳನ್ನು ತಂದು ನನ್ನ ಮುಂದೆ ಇಟ್ಟ. ಅವನ ಜೊತೆ ಕೂತು ಅವನೊಂದಿಗೆ ಆಟವಾಡತೊಡಗಿದೆ. ಅವನ ತೊದಲು ಮಾತುಗಳು, ಮಾತಿಗಿಂತ ಹೆಚ್ಚಾಗಿ action ಮಾಡಿ ಎಲ್ಲವನ್ನು ತೋರಿಸೋದು, ಅವನೊಂದಿಗೆ ಇರೋ ಅಷ್ಟು ಹೊತ್ತು, ಸಮಯ ಕಳೆದದ್ದೆ ಗೊತ್ತಾಗಲಿಲ್ಲ. ಸರಿ ಈಗ ನಾನು ಮನೆಗೆ ಹೋಗುತ್ತೇನೆ ಎಂದು ಎದ್ದು ಹೊರಟೆ, ಕೂಡಲೇ ಅವನು ನನ್ನ ಕೈ ಹಿಡಿದು ಮತ್ತೆ ಒಳಗೆ ಕರೆದು ಕೊಂಡು ಹೋದ. ಯಾಕೋ ಎಂದರೆ action ಮಾಡುತ್ತಲೆ ಊಟ ಮಾಡು ಅಂತ ತೋರಿಸ ತೊಡಗಿದ. ನಾನು ಅದಕ್ಕೆ ಸರಿ ಊಟ ಮಾಡುತ್ತೇನೆ, ಹೋಗಿ ತಟ್ಟೆಗೆ ಊಟ ಹಾಕಿಕೊಂಡು ಬಾ ಎಂದು ಹೇಳಿದೆ. ಅವನು ಅಡಿಗೆ ಮನೆಗೆ ಹೋಗಿ ಅವನ ಅಮ್ಮನಿಗೆ action ಮಾಡುತ್ತ ನನ್ನನ್ನು ತೋರಿಸಿ ಊಟ ಹಾಕಿಕೊಡು ಎಂದ. ಅವನಮ್ಮ ಇನ್ನೂ ಅಡಿಗೆ ಆಗಿಲ್ಲ ಕಣೋ, ಇರು ಸ್ವಲ್ಪ ಒತ್ತು ಎಂದಳು. ಆದರೆ ಅವನು ಸುಮ್ಮನೇ ಇರಲಿಲ್ಲ, ಅಲ್ಲೆ ಕೆಳಗೆ ಇದ್ದ ತಟ್ಟೆಯನ್ನು ತಂದು ನನ್ನ ಮುಂದೆ ಇಟ್ಟ. ಅವನ ಈ ಪ್ರೀತಿ ಕಂಡು, ಅವನೊಂದಿಗೆ ಇನ್ನಷ್ಟು ಕಾಲ ಕಳೆಯಬೇಕೆಂಬ ಆಸೆಯಾಯಿತು. ಅವನಿಗೆ ಸರಿ ನಾನು ಈಗಲೆ ಹೋಗಲ್ಲ, ಇಲ್ಲೆ ಇರ್ತೀನಿ ಅಂದೇ. ಇವನ ಮುಗ್ಧ ಪ್ರೀತಿ ಇಲ್ಲಿಗೆ ಮುಗಿಯಲಿಲ್ಲ. ಅವನೊಂದಿಗೆ ಮಂಚದ ಮೇಲೆ ಕುಳಿತು ಆಡುತ್ತಿದ್ದೆ. ಆಡುತ್ತಾ ನಾನು ಸರಿ ನನಗೆ ಈಗ ನಿದ್ದೆ ಬರುತ್ತಿದೆ ನಾನು ಮಾಲ್ಗುತ್ತೇನೆ ಎಂದು ಅವನ ಪುಟ್ಟ ಕಾಲ ಮೇಲೆ ನನ್ನ ತಲೆ ಇಟ್ಟೆ. ಅವನು ನನ್ನನ್ನು ಎಬ್ಬಿಸಿ, ಅಲ್ಲಿದ್ದ ದಿಂಬಿನ ಬಳಿ ಹೋಗಿ ಇಲ್ಲಿ ತಲೆ ಇಟ್ಟು ಮಲಗಿಕೊ ಎಂದು ತನ್ನ ಪುಟ್ಟ ಕೈನಲ್ಲಿ ತೋರಿಸತೊಡಗಿದ. ನಾನು ಇದರ ಮೇಲೆ ಮಲಗ ಬೇಕಾ, ಸರಿ ಮಲ್ಗ್ತೀನಿ ಎಂದು ಮಲಗಿದೆ. ಆಗ ಅವನು ಅಲ್ಲೇ ಇದ್ದ bedsheet ತೆಗೆಯಲು ಕಷ್ಟ ಪಡುತ್ತಿದ್ದ. ಯಾಕೋ ಮರಿ ಅದು ಎಂದೆ, ಆಗ ಅವನು ತನ್ನ ತೊದಲು ಮಾತಿನೊಂದಿಗೆ action ಮೂಲಕವೆ ಇದ್ದನ್ನು ಹೊದ್ದುಕೊಂಡು ಮಲಗಿಕೊ ಎಂದ. ಈ ಮುಗ್ಧ ಮನಸ್ಸಿನ ಮಗುವಿನ ಪ್ರೀತಿ ಕಂಡು ನನಗೆ ತಿಳಿಯದಂತೆ ನನ್ನ ಕಣ್ತುಂಬಿ ಬಂತು. ಅವನ ಈ ಪ್ರೀತಿ ಬೇಜಾರಾಗಿದ್ದ ನನ್ನ ಮನಸ್ಸಿಗೆ ಅದೆಷ್ಟು ಕುಶಿ ಕೊಟ್ಟಿತ್ತೋ ನನಗೆ ಹೇಳಲು ಅಸಾಧ್ಯ. ಮನೆಯಿಂದ ಹೊರಟಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಕ್ಕರೆ ಸಾಕು ಎಂದು ಹೊರಟ ನನಗೆ, ಪ್ರೀತಿಯ ಸಾಗರವೇ ಸಿಕ್ಕಿತ್ತೇನೋ ಎನಿಸಿತು. ನಿಜವಾಗಿಯು ಮಕ್ಕಳು ದೇವರ ರೂಪವೇ ಇರಬೇಕು. ಮನಸ್ಸಿನಲ್ಲಿ ಎಷ್ಟೇ ನೋವಿರಲಿ, ಎಷ್ಟೇ ಬೇಸರವಾಗಿರಲಿ, ಮಕ್ಕಳೊಂದಿಗೆ ಸ್ವಲ್ಪ ಒತ್ತು ಕಳೆದರೆ ಸಾಕು, ಎಂತ ನೋವೇ ಹಾಗಿರಲಿ ಅದನ್ನು ಕ್ಷಣದಲ್ಲಿ ಮರೆಯುವಂತೆ ಮಾಡುವ ಮನಸ್ಸು, ಶಕ್ತಿ ಈ ಮಕ್ಕಳಲ್ಲಿ ಇದೆ. ಅಂದಿನಿಂದ ವಾರಕ್ಕೆ ಹೊಮ್ಮೆಯಾದರೊ ಈ ನನ್ನ ಪುಟ್ಟ ಜಯಂತನನ್ನು ನಾನು ನೋಡಬೇಕು, ಅವನೊಂದಿಗೆ ಆಟವಾಡಬೇಕು, ನನಗೆ ತಿಳಿಯದಂತೆ ಅವನಲ್ಲಿ ಒಂದು ಅನುಬಂಧ ಬೆಳೆದು ಬಿಟ್ಟಿದೆ, ಪ್ರೀತಿಯ ಬಂದ, ಅವನೊಂದಿಗೆ ಎಷ್ಟು ಕಾಲ ಕಳೆದರು ಕಮ್ಮಿಯೇ ಎನಿಸುತ್ತದ್ದೆ. ಈ ನನ್ನ ಪುಟ್ಟ ಮಗು ಯಾವಾಗಲು ಸಂತೋಷವಾಗಿರಬೇಕು, ಈ ಮುಗ್ಧ ಮನಸ್ಸು ಎಂದಿಗೂ ಕಲ್ಮಷವಾಗಬಾರದು, ಮೋಸ, ಅಸೂಯೆ ಇಂತ ಯಾವುದೆ ಕೆಟ್ತತನ ಅವನ ಬಳಿ ಸುಳಿಯಲುಬಾರದು. ಯಾವಾಗಲು ಅವನು ನಗುತ್ತ ಎಲ್ಲರನ್ನೂ ನಗಿಸುತ್ತಾ ಸುಕವಾಗಿರಬೇಕು ಎಂದು ಆಶಿಸುತ್ತೇನೆ.